ADVERTISEMENT

ಆಂಧ್ರಕ್ಕೆ ವಿಶೇಷ ಸ್ಥಾನಮಾನ ‘ರಕ್ಷಾ ಬಂಧನ’ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 19:30 IST
Last Updated 16 ಆಗಸ್ಟ್ 2016, 19:30 IST
ಆಂಧ್ರಕ್ಕೆ ವಿಶೇಷ ಸ್ಥಾನಮಾನ  ‘ರಕ್ಷಾ ಬಂಧನ’ ಪ್ರತಿಭಟನೆ
ಆಂಧ್ರಕ್ಕೆ ವಿಶೇಷ ಸ್ಥಾನಮಾನ ‘ರಕ್ಷಾ ಬಂಧನ’ ಪ್ರತಿಭಟನೆ   

ಹೈದರಾಬಾದ್‌: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಇಲ್ಲಿನ ಮಹಿಳೆಯರು ಅಂತರ್ಜಾಲ ರಾಖಿ ಪ್ರತಿಭಟನೆ ಪ್ರಾರಂಭಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್‌ ಖಾತೆ @narendramodi, ಪ್ರಧಾನಿ ಕಚೇರಿ ಖಾತೆ @PMOIndia ಮತ್ತು ಫೇಸ್‌ಬುಕ್‌ನ ಪ್ರಧಾನಿ ಅವರ ಪುಟಗಳಲ್ಲಿ ‘ರಾಖಿ ಪ್ರೊಟೆಸ್ಟ್‌’ ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ರಾಖಿಯ ಚಿತ್ರಗಳನ್ನು ರವಾನಿಸಲಿದ್ದಾರೆ.

ಮಾಜಿ ಸಂಸದ ಕೊನಥಲ ರಾಮಕೃಷ್ಣ ಅವರು ಈ ಮಾದರಿಯ ಪ್ರತಿಭಟನೆ ಆಯೋಜಿಸಿದ್ದು, ಇದಕ್ಕಾಗಿಯೇ ವಿಶೇಷ ಮಾದರಿಯ ರಾಖಿಗಳನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ಟ್ವಿಟರ್‌ ಖಾತೆ ಅಥವಾ ಅವರ ಫೇಸ್‌ಬುಕ್‌ ಪುಟದಿಂದ ರಾಖಿಯ ಚಿತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು, ಅದನ್ನು  ಪ್ರಧಾನಿಗೆ ಕಳುಹಿಸುವಂತೆ ಅವರು ಕೋರಿದ್ದಾರೆ.

2014ರ ಆಂಧ್ರಪ್ರದೇಶ ಪುನರ್‌ರಚನಾ ಕಾಯ್ದೆಯನ್ನು ಅನುಷ್ಠಾನಗೊಳಿಸದ ಮತ್ತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿದ್ದ ಭರವಸೆಗಳನ್ನು ಜಾರಿಗೊಳಿಸದ ಕಾರಣ ಕೇಂದ್ರ ಸರ್ಕಾರದ ವಿರುದ್ಧ ‘ರಕ್ಷಾ ಬಂಧನ ಪ್ರತಿಭಟನೆ’ ಹಮ್ಮಿಕೊಳ್ಳಲಾಗಿದೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.