ADVERTISEMENT

ಈದ್ ಆಚರಣೆಯಲ್ಲಿ ಅಡ್ವಾಣಿ, ರಾಜನಾಥ್, ಮುರಳಿ ಮನೋಹರ್

ಏಜೆನ್ಸೀಸ್
Published 16 ಜೂನ್ 2018, 10:57 IST
Last Updated 16 ಜೂನ್ 2018, 10:57 IST
ಈದ್ ಆಚರಣೆಯಲ್ಲಿ ಅಡ್ವಾಣಿ, ರಾಜನಾಥ್, ಮುರಳಿ ಮನೋಹರ್
ಈದ್ ಆಚರಣೆಯಲ್ಲಿ ಅಡ್ವಾಣಿ, ರಾಜನಾಥ್, ಮುರಳಿ ಮನೋಹರ್   

ನವದೆಹಲಿ: ರಾಷ್ಟ್ರದಲ್ಲಿ ಈದ್‌–ಉಲ್–ಫಿತ್ರ್‌ ಸಂಭ್ರಮಾಚರಣೆ ಮನೆ ಮಾಡಿದ್ದು, ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ.

ಬಿಜೆಪಿ ಹಿರಿಯ ಮುಖಂಡರಾದ ಎಲ್‌.ಕೆ. ಅಡ್ವಾಣಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮುರಳಿ ಮನೋಹರ ಜೋಷಿ ಮತ್ತು ಚಲನಚಿತ್ರ ನಿರ್ಮಾಪಕ ಮಧುರ್‌ ಬಂಡರ್ಕರ್‌ ಅವರು ಪಕ್ಷದ ಮುಖಂಡ ಶಹನವಾಜ್‌ ಹುಸೇನ್‌ ಹಾಗೂ ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರ ಮನೆಯಲ್ಲಿ ನಡೆದ ಈದ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರ ಮನೆಯಲ್ಲಿ ರಾಜನಾಥ್‌ ಸಿಂಗ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಾಲ್ ಮತ್ತು ಮಧುರ್‌ ಬಂಡಾರ್ಕರ್‌ ಸೇರಿದಂತೆ ಇತರ ಮುಖಂಡರು ಭಾಗಿಯಾಗಿದ್ದರು.

ADVERTISEMENT

ಶುಭ ಕೋರಿದ ರಾಜನಾಥ್‌
ಈದ್‌ ಸಂದರ್ಭದಲ್ಲಿ ಸಮಾಜದ ಸರ್ವರಿಗೂ ಶುಭಾಶಯ ಕೋರುತ್ತೇನೆ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಈ ವೇಳೆ, ಪಾಕಿಸ್ತಾನ ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಅದರ ಬಗ್ಗೆ ನಾಳೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.