ಹೈದರಾಬಾದ್: ಉಕ್ರೇನ್ನ ಝಪೊರ್ಜಿಯಾ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಹೈದರಾಬಾದ್ನ ಇಬ್ಬರು ತೆಲುಗು ವಿದ್ಯಾರ್ಥಿಗಳು ಸ್ನೇಹಿತನನ್ನು ಪಾರುಮಾಡಲು ಹೋಗಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಎಂಬಿಬಿಎಸ್ ಅಂತಿಮ ವರ್ಷದಲ್ಲಿದ್ದ ಹೈದರಾಬಾದ್ನ ಕುಂಟ್ಲೂರಿನ ಶಿವಕಾಂತ್ ರೆಡ್ಡಿ ಹಾಗೂ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಅಶೋಕ್ ತಮ್ಮ ಸ್ನೇಹಿತ ಮುಖೇಶ್ನನ್ನು ಕಾಪಾಡುವ ವೇಳೆ ಸಾವಿಗೀಡಾಗಿದ್ದಾರೆ.
ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೋಮವಾರ ಬೀಚ್ ವಾಲಿಬಾಲ್ ಆಡುತ್ತಿದ್ದ ಸಂದರ್ಭ ಮುಖೇಶ್ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗಿದ್ದ.
ರಜೆ ಮುಗಿದ ಬಳಿಕ ರೆಡ್ಡಿ ಸೆಪ್ಟೆಂಬರ್ 2ರಂದು ಉಕ್ರೇನ್ಗೆ ಮರಳಿದ್ದ. ಇನ್ನು ಆರು ತಿಂಗಳಲ್ಲಿ ಆತ ತನ್ನ ಅಧ್ಯಯನ ಪೂರ್ಣಗೊಳಿಸಿ ಪದವಿ ಪಡೆಯುತ್ತಿದ್ದ. ಆತ ಮೃತಪಟ್ಟಿರುವ ವಿಷಯ ನಮಗೆ ಮಂಗಳವಾರ ತಿಳಿಯಿತು. ಅಶೋಕ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ ಎಂದು ರೆಡ್ಡಿ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.