ADVERTISEMENT

ಕಾಶ್ಮೀರದಲ್ಲಿ ಮುಂದುವರಿದ ಹಿಮಪಾತ: 12 ಬಲಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಶ್ರೀನಗರ(ಐಎಎನ್ಎಸ್‌/ಪಿಟಿಐ): ಕಾಶ್ಮೀರ ಕಣಿವೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಹಿಮಪಾತದಿಂದ ಉಂಟಾದ ಹಿಮಕುಸಿ­ತ­ದಿಂದಾಗಿ ಇಬ್ಬರು ಯೋಧರು ಸೇರಿ 12 ಜನರು ಮೃತಪಟ್ಟಿದ್ದಾರೆ.

ಅಲ್ಲದೇ, ಜಮ್ಮು ಮತ್ತು ಕಾಶ್ಮೀರದ ಹಲವು ಪ್ರದೇಶ­­ಗಳಲ್ಲಿ ಮನೆಗಳು  ಕುಸಿದಿರುವ ಕುರಿತು ವರದಿಯಾಗಿದೆ.

ಅಕಾಲಿಕ ಹಿಮಪಾತದಿಂದ ಕಾಶ್ಮೀರದ ವಿವಿಧೆಡೆ ಸಿಲುಕಿ­ಕೊಂಡಿದ್ದ 100 ಜನ­ರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸ­ಲಾಗಿದೆ. ಇಷ್ಟೇ ಅಲ್ಲದೇ ಹಿಮಪಾತದ ತೀವ್ರತೆಗೆ ಸುಮಾರು 150 ಮನೆಗಳು ಜಖಂಗೊಂಡಿವೆ.

ಕಾರ್ಗಿಲ್‌ನ ಲಡಾಖ್‌ ಪ್ರಾಂತ್ಯ­­­ದಲ್ಲಿ ಕಾರ್ಯನಿರ್ವಹಿಸುತ್ತಿದ್ದ 82 ಫೀಲ್ಡ್‌ ರೆಜಿ­­ಮೆಂಟ್‌ನ ಯೋಧ­ರಾದ ನಾಯಕ್‌ ವಿಜಯ್ ಪ್ರಸಾದ್‌, ಧರ್ಮೇಂದ್ರ ಸಿಂಗ್‌ ಅವರು ಹಿಮಕುಸಿತ­ದಲ್ಲಿ ಮೃತ­ಪಟ್ಟ­ವರು.

ಇವ­ರಿಬ್ಬರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ರಾಜ್ಯದ ವಿವಿಧೆಡೆ ಹಿಮಕುಸಿತ­ವಾಗುವ ಸಾಧ್ಯತೆ ಇದೆ. ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಎಚ್ಚರಿಕೆ ನೀಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.