ADVERTISEMENT

ಕೋರ್ಟ್‌ ಆದೇಶ ಉಲ್ಲಂಘಿಸಿ ಶಶಿಕಲಾ ಪುಷ್ಪಾ, ರಾಮಸ್ವಾಮಿ ವಿವಾಹ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:33 IST
Last Updated 26 ಮಾರ್ಚ್ 2018, 19:33 IST

ಚೆನ್ನೈ: ವಕೀಲ ಡಾ.ಬಿ.ರಾಮಸ್ವಾಮಿ ಅವರು ಕೋರ್ಟ್‌ ಆದೇಶ ಉಲ್ಲಂಘಿಸಿ ಸೋಮವಾರ ದೆಹಲಿಯಲ್ಲಿ ಎಐಎಡಿಎಂಕೆ ಉಚ್ಛಾಟಿತ ಸಂಸದೆ ಶಶಿಕಲಾ ಪುಷ್ಪಾ ಅವರನ್ನು ಮದುವೆಯಾಗಿದ್ದಾರೆ.

ರಾಮಸ್ವಾಮಿ ಮೊದಲ ಪತ್ನಿ ಟಿ.ಸತ್ಯಪ್ರಿಯಾ ಕೋರ್ಟ್‌ ಮೆಟ್ಟಿಲೇರಿದ್ದು, ಮೊದಲ ಮದುವೆಗೆ ಇನ್ನೂ ಮಾನ್ಯತೆ ಇದೆ. ಅಧಿಕೃತವಾಗಿ ವಿಚ್ಛೇದನ ದೊರೆಯುವವರೆಗೂ ಮತ್ತೊಂದು ಮದುವೆ ಆಗಬಾರದು ಎಂದು ಕೌಟುಂಬಿಕ ನ್ಯಾಯಾಲಯ ರಾಮಸ್ವಾಮಿ ಅವರಿಗೆ ಆದೇಶಿಸಿತ್ತು. 

ಶಶಿಕಲಾ ಪುಷ್ಪಾ ಮತ್ತು ರಾಮಸ್ವಾಮಿ ಮದುವೆ ಆಹ್ವಾನ ಪತ್ರಿಕೆ ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ನಂತರ ಸತ್ಯಪ್ರಿಯಾ ಈ ಕುರಿತು ಜಿಲ್ಲಾಧಿಕಾರಿ ಬಳಿ ದೂರು ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.