
ಪ್ರಜಾವಾಣಿ ವಾರ್ತೆಹೈದರಾಬಾದ್ (ಪಿಟಿಐ): ಜನಾರ್ದನ ರೆಡ್ಡಿ ಅವರ ಉದ್ದೇಶಿತ ಬ್ರಹ್ಮಣಿ ಉಕ್ಕು ಕಂಪೆನಿ ಸಂಬಂಧ ಇದೀಗ ಆಂಧ್ರ ಸರ್ಕಾರ ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದೆ. ವೈ.ಎಸ್.ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಬ್ರಹ್ಮಣಿ ಉಕ್ಕು ಕಾರ್ಖಾನೆ ಹಾಗೂ ಕಡಪ ಜಿಲ್ಲೆಯಲ್ಲಿ ಖಾಸಗಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಒಟ್ಟು 10,760 ಎಕರೆ ಕಂದಾಯ ಜಮೀನು ಮಂಜೂರು ಮಾಡಿದ್ದರು.
ಆದರೆ ಈ ಕಾಮಗಾರಿಗಳನ್ನು ಕೈಗೊಳ್ಳದ್ದಕ್ಕೆ ಕಾರಣ ವಿವರಿಸಲು ಸೂಚಿಸಿ, ಆಂಧ್ರ ಸರ್ಕಾರ ಕೆಲವು ತಿಂಗಳ ಹಿಂದೆ ಬ್ರಹ್ಮಣಿ ಕಂಪೆನಿಗೆ ಷೋಕಾಸ್ ನೋಟಿಸ್ ನೀಡಿತ್ತು. ಇದೀಗ ಸರ್ಕಾರ ಈ ಯೋಜನೆಗಳನ್ನು ಬೇರೆ ಸಂಸ್ಥೆಗೆ ವಹಿಸುವ ಸಾಧ್ಯತೆ ಕುರಿತು ಚಿಂತಿಸುತ್ತಿದೆ. ಅದಕ್ಕೆ ಮುನ್ನ ಕಾನೂನು ಅಭಿಪ್ರಾಯ ಎದುರು ನೋಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.