ADVERTISEMENT

ದಲಿತರ ಪರ ಮಾತನಾಡಲು ಅವಕಾಶ ನಿರಾಕರಣೆ: ರಾಜ್ಯಸಭೆಗೆ ಮಾಯಾವತಿ ರಾಜಿನಾಮೆ

ಏಜೆನ್ಸೀಸ್
Published 18 ಜುಲೈ 2017, 13:02 IST
Last Updated 18 ಜುಲೈ 2017, 13:02 IST
ದಲಿತರ ಪರ ಮಾತನಾಡಲು ಅವಕಾಶ ನಿರಾಕರಣೆ: ರಾಜ್ಯಸಭೆಗೆ ಮಾಯಾವತಿ ರಾಜಿನಾಮೆ
ದಲಿತರ ಪರ ಮಾತನಾಡಲು ಅವಕಾಶ ನಿರಾಕರಣೆ: ರಾಜ್ಯಸಭೆಗೆ ಮಾಯಾವತಿ ರಾಜಿನಾಮೆ   

ನವದೆಹಲಿ:  ರಾಜ್ಯ ಸಭೆಯಲ್ಲಿ ದಲಿತರ ಪರವಾಗಿ ಮಾತನಾಡಲು ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ  ಮಾಯಾವತಿ ಮಂಗಳವಾರ ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಸಂಸತ್ ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದು ರಾಜ್ಯಸಭಾ ಕಲಾಪದಲ್ಲಿ ಪಾಲ್ಗೊಂಡಿದ್ದ ಮಾಯಾವತಿ ಅವರು ದಲಿತರ ಮೇಲಿನ ದೌರ್ಜನ್ಯದ ಬಗ್ಗೆ  ಮಾತನಾಡುತ್ತಿದ್ದಾಗ ಸದನದಲ್ಲಿ ಗದ್ದಲವುಂಟಾಗಿದೆ.

ಈ ವೇಳೆ ಕೋಪಗೊಂಡ ಮಾಯಾವತಿ, ಸದನದಲ್ಲಿ ಮಾತನಾಡಲು ಅವಕಾಶ ನೀಡದೇ ಇದ್ದರೆ ನಾನು ಈ ಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ಸದನದಿಂದ  ಹೊರ ನಡೆದಿದ್ದರು.

ADVERTISEMENT

ಕೊನೆಗೂ ಮಾತನಾಡಲು ಅವಕಾಶ ನೀಡದಿದ್ದರಿಂದ ಕೋಪಗೊಂಡ ಮಾಯಾವತಿ ನುಡಿದಂತೆ ರಾಜ್ಯಸಭೆಗೆ ರಾಜಿನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.