ADVERTISEMENT

ಪ್ರಣವ್ ಪುತ್ರನಿಗೆ ಪ್ರಯಾಸದ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST
ಪ್ರಣವ್ ಪುತ್ರನಿಗೆ ಪ್ರಯಾಸದ ಗೆಲುವು
ಪ್ರಣವ್ ಪುತ್ರನಿಗೆ ಪ್ರಯಾಸದ ಗೆಲುವು   

ಡೆಹ್ರಾಡೂನ್/ ಬೆಹರಾಂಪುರ (ಪಿಟಿಐ): ಲೋಕಸಭೆಯ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ತೆಹ್ರಿಯಲ್ಲಿ ಸೋಲನುಭವಿಸದ್ದರೆ, ಜಂಗೀಪುರದಲ್ಲಿ ತೀರಾ ಕಡಿಮೆ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

 ರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಣವ್ ಮುಖರ್ಜಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಜಂಗೀಪುರ ಲೋಕಸಭಾ ಕ್ಷೇತ್ರದಲ್ಲಿ ಅವರ ಪುತ್ರ ಅಭಿಜಿತ್ ಮುಖರ್ಜಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು.

ಅಭಿಜಿತ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಐನ ಮುಜಫರ್ ಹುಸೇನ್ ಅವರನ್ನು  ಕೇವಲ 2,536 ಮತಗಳ ಅಂತರದಿಂದ ಸೋಲಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೆ ಅಭಿಜಿತ್ ಗೆಲುವು ಸಾಧ್ಯವಾಗುತ್ತಿರಲಿಲ್ಲ.

ಉತ್ತರಾಖಂಡದ ಪ್ರತಿಷ್ಠಿತ ತೆಹ್ರಿ ಲೋಕಸಭಾ ಕ್ಷೇತ್ರದಲ್ಲಿ  ಮುಖ್ಯಮಂತ್ರಿ ವಿಜಯ್  ಬಹುಗುಣ  ಅವರು  ಸಂಸದ  ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ ತುಂಬಲು ಅವರ  ಪುತ್ರ ಸಾಕೇತ್ ಬಹುಗುಣ ಅವರನ್ನು ಕಾಂಗ್ರೆಸ್ ಸ್ಪರ್ಧೆಗಿಳಿಸಿತ್ತು.

ತೆಹ್ರಿ ರಾಜಮನೆತನದ ಮಹೇಂದ್ರ ಷಾ ಅವರ ಸೊಸೆ  ಮಾಲಾ ರಾಜ್‌ಲಕ್ಷ್ಮಿ ಷಾ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಷಾ ಅವರು 22, 431 ಮತಗಳ ಅಂತರದಿಂದ ಸಾಕೇತ್ ಅವರನ್ನು ಪರಾಭವಗೊಳಿಸಿದ್ದಾರೆ.

ಈಗ ಲೋಕಸಭೆಯಲ್ಲಿ ಕಾಂಗ್ರೆಸ್ ಬಲ 206ಕ್ಕೆ ಇಳಿದಿದ್ದರೆ ಬಿಜೆಪಿಯ ಬಲ 115ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.