ADVERTISEMENT

ಬಿಜೆಪಿಗೆ ಅಭಿವೃದ್ಧಿ, ಬದ್ಧತೆ, ಸಾಂಘಿಕ ಪರಿಶ್ರಮದ ಗೆಲುವು: ಅಮಿತ್‌ ಶಾ

ಏಜೆನ್ಸೀಸ್
Published 3 ಮಾರ್ಚ್ 2018, 9:58 IST
Last Updated 3 ಮಾರ್ಚ್ 2018, 9:58 IST
ಚಿತ್ರ: ಎಎನ್‌ಐ ಟ್ವೀಟ್
ಚಿತ್ರ: ಎಎನ್‌ಐ ಟ್ವೀಟ್   

ನವದೆಹಲಿ: ಈಶಾನ್ಯದ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಬಿಜೆಪಿ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದ್ದಂತೆ ಸರ್ಕಾರ ರಚನೆ ಕಸರತ್ತುಗಳು ಆರಂಭವಾಗಿದೆ.

ತ್ರಿಪುರಾದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶನಿವಾರ ಮಧ್ಯಾಹ್ನ ಪಕ್ಷದ ಕಚೇರಿಗೆ ಬಂದಿದ್ದಾರೆ.

ಇಲ್ಲಿಗೆ ಬಂದ ಅಮಿತ್‌ ಶಾ ಅವರನ್ನು ಪಕ್ಷದ ಅಭಿಮಾನಿಗಳು ಹೂವು ಚೆಲ್ಲಿ ಸ್ವಾಗತಿಸಿದರು. ಶಾ ಅವರು ವಿಜಯದ ಸಂಕೇತವನ್ನು ತೋರಿಸುತ್ತಾ ಜನರತ್ತ ಕೈ ಬೀಸಿದರು.

ADVERTISEMENT

‘ಸಾಮೂಹಿಕವಾಗಿ ಬಿಜೆಪಿಯನ್ನು ಬೆಂಬಲಿಸಿದ ತ್ರಿಪುರದ ಸಹೋದರ, ಸಹೋದರಿಯರಿಗೆ ಅಭಿನಂದನೆಗಳು. ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ಈಶಾನ್ಯ ರಾಜ್ಯಗಳ ಅಭಿವೃದ್ಧಿಪರ ಹಾಗೂ ಬದ್ಧತೆಗೆ ಸಂದ ವಿಜಯ’ ಎಂದು ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.