ಸೀತಾಮಡಿ (ಬಿಹಾರ)(ಪಿಟಿಐ): ಮಾವೊವಾದಿಗಳ ತಂಡ ಬಿಹಾರದ ಸೀತಾಮಡಿ ಜಿಲ್ಲೆಯ ಖೈರವ ಮಣಿಯಾರಿ ಗ್ರಾಮದಲ್ಲಿ ಗುತ್ತಿಗೆದಾರರೊಬ್ಬರಿಗೆ ಸೇರಿದ ಬಿಸಿ ಮಿಶ್ರಣ ಘಟಕಕ್ಕೆ ಬೆಂಕಿ ಹಚ್ಚಿ ಮೂವರು ಭದ್ರತಾ ಸಿಬ್ಬಂದಿಯನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಗುತ್ತಿಗೆದಾರ ಅಮಿತ್ ಕುಮಾರ್ ಸಿಂಗ್ ಅವರ ಒಡೆತನದ ರಸ್ತೆ ನಿರ್ಮಾಣದ ಸಾಮಗ್ರಿ ಮಿಶ್ರಣ ಘಟಕದ ಮೇಲೆ ಮಾವೊವಾದಿಗಳ ತಂಡ ಮಂಗಳವಾರ ರಾತ್ರಿ ದಾಳಿ ನಡೆಸಿ ಘಟಕಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.