ADVERTISEMENT

ಶೀಲಾ ದೀಕ್ಷಿತ್‌ ಪ್ರಮಾಣ­­ವಚನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST
ಶೀಲಾದೀಕ್ಷಿತ್‌ ಅವರಿಗೆ ನ್ಯಾ.ಮಂಜುಳಾ ಚೆಲ್ಲೂರ್‌ ಪ್ರಮಾಣ ವಚನ ಬೋಧಿಸಿದರು.
ಶೀಲಾದೀಕ್ಷಿತ್‌ ಅವರಿಗೆ ನ್ಯಾ.ಮಂಜುಳಾ ಚೆಲ್ಲೂರ್‌ ಪ್ರಮಾಣ ವಚನ ಬೋಧಿಸಿದರು.   

ತಿರುವನಂತಪುರ(ಪಿಟಿಐ): ದೆಹಲಿಯ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌ ಅವರು ಕೇರಳ ರಾಜ್ಯಪಾಲರಾಗಿ ಮಂಗಳವಾರ ಇಲ್ಲಿನ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. 

ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯ­­ಮೂರ್ತಿ ಮಂಜುಳಾ ಚೆಲ್ಲೂರ್‌ ಅವರು ಶೀಲಾ ದೀಕ್ಷಿತ್ ಅವರಿಗೆ ಪ್ರಮಾಣ­ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಹಾಗೂ ಸಂಪುಟ ಸದಸ್ಯರು  ಉಪಸ್ಥಿತರಿದ್ದರು.

ಕೇರಳ ರಾಜ್ಯಪಾಲರಾಗಿದ್ದ ನಿಖಿಲ್‌ ಕುಮಾರ್‌ ಅವರು ಲೋಕಸಭಾ ಚುನಾ­ವಣೆಗೆ ಬಿಹಾರದ ಔರಂಗಾ­ಬಾದ್‌­ನಿಂದ ಸ್ಪರ್ಧಿಸಲಿರುವ ಕಾರಣ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.   ಶೀಲಾ ದೀಕ್ಷಿತ್‌ ಅವರು 1998 ರಿಂದ 2013ರವರೆಗೆ ದೆಹಲಿ ಮುಖ್ಯಮಂತ್ರಿ­ಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.