ಕೋಲ್ಕತ್ತ (ಐಎಎನ್ಎಸ್): ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಕರೆ ಮೇರೆಗೆ ‘ಸ್ವಚ್ಛ ಭಾರತ’ ಅಭಿಯಾನದಲ್ಲಿ ಭಾಗವಹಿಸುವುದಾಗಿ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಈ ಕುರಿತು ಆಸ್ಪ್ರೇಲಿಯಾದಿಂದ ಟಿ.ವಿ ವಾಹಿನಿಗೆ ದೂರವಾಣಿಯಲ್ಲಿ ಗುರುವಾರ ಪ್ರತಿಕ್ರಿಯಿಸಿದ ಗಂಗೂಲಿ, ‘ಭಾರತ ಅತ್ಯಂತ ದೊಡ್ಡ ದೇಶ. ಜನಸಂಖ್ಯೆ ಹೆಚ್ಚಿರುವುದರಿಂದ ಸಮಸ್ಯೆಗಳು ಅಧಿಕ. ಹಾಗಾಗಿ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಹೇಳಿದರು.
ರಾಜಕೀಯ ಪ್ರವೇಶದ ಗಾಳಿಸುದ್ದಿಯನ್ನು ಇದೇ ವೇಳೆ ಅಲ್ಲಗಳೆದ ಅವರು, ‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಈ ಮಾತನ್ನು ಹಿಂದೆಯೂ ಹೇಳಿದ್ದೇನೆ’ ಎಂದರು.
ಮೋದಿ ಹೆಸರಿಸಿದ ಪ್ರಮುಖರು
ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ನೃತ್ಯಗಾರ್ತಿ ಸೋನಾಲ್ ಮನ್ಸಿಂಗ್, ನಾಗಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ, ಹಾಸ್ಯಗಾರ ಕಪಿಲ್ ಶರ್ಮ, ಈ ನಾಡು ಗ್ರೂಪ್, ಅರುಣ್ ಪುರಿ ಮತ್ತು ಅವರ ಇಂಡಿಯಾ ಟುಡೆ ಗ್ರೂಪ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಹಾಗೂ ಮುಂಬೈನ ಖ್ಯಾತ ‘ಡಬ್ಬಾವಾಲಾ’ಗಳನ್ನು ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಪ್ರಧಾನಿ ಮೋದಿ ಹೆಸರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.