ನವದೆಹಲಿ (ಪಿಟಿಐ): ಸ್ವದೇಶಿ ಮಾರುಕಟ್ಟೆಗೆ ನೈಸರ್ಗಿಕ ನೂಲಿನ ಪೂರೈಕೆಯ ಪ್ರಮಾಣವನ್ನು ಹೆಚ್ಚಿಸುವುದಕ್ಕಾಗಿ ಹತ್ತಿ ರಫ್ತಿನ ಮೇಲೆ ಸರ್ಕಾರ ಸೋಮವಾರ ನಿರ್ಬಂಧ ಹೇರಿದೆ. `
ಸರ್ಕಾರದ ಮುಂದಿನ ಆದೇಶ ಬರುವವರೆಗೂ ವಿದೇಶಗಳಿಗೆ ರಪ್ತು ಮಾಡಲಾಗುವ ಹತ್ತಿಯ ಮೇಲೆ ವಿಧಿಸಲಾಗಿರುವ ಈ ನಿರ್ಬಂಧ ಜಾರಿಯಲ್ಲಿರುತ್ತದೆ~ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮೋದಿ ಪ್ರತಿಕ್ರಿಯೆ: ಹತ್ತಿ ರಫ್ತು ನಿಷೇಧಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಇದರಿಂದ ಜವಳಿ ಉದ್ದಿಮೆಗೆ ಲಾಭವಾಗುತ್ತದೆ ಎಂದು ಹೇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.