ADVERTISEMENT

ಹಿಮಕುಸಿತ: ಗಡಿ ಬೇಲಿಗೆ ತೀವ್ರ ಹಾನಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಶ್ರೀನಗರ (ಪಿಟಿಐ):  ಕಾಶ್ಮೀರದಲ್ಲಿ ಸತತವಾಗಿ ಸಂಭವಿಸಿದ ಹಿಮಕುಸಿತಗಳಿಂದಾಗಿ ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಳವಡಿಸಲಾಗಿರುವ  ತಡೆ ಬೇಲಿಗೆ ತೀವ್ರ ಹಾನಿಯಾಗಿದ್ದು, ಉಗ್ರರು ದೇಶದ ಗಡಿಯೊಳಕ್ಕೆ ನುಸುಳುವ ಸಾಧ್ಯತೆ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಶನಿವಾರ ಸೇನೆ ತಿಳಿಸಿದೆ.

ಈ ಮಧ್ಯೆ, ಕಣಿವೆಯಲ್ಲಿ ಮತ್ತಷ್ಟು ಹಿಮಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಗಡಿ ನಿಯಂತ್ರಣ ರೇಖೆಯಲ್ಲಿ ಕೆಲವು ಸೇನಾ  ನೆಲೆಗಳನ್ನು ಸ್ಥಗಿತಗೊಳಿಸಲು ಸೇನೆ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.