ADVERTISEMENT

ಪಟ್ನಾ ಜೈಲಿನಿಂದ ಪರಾರಿಯಾಗಿದ್ದ ಇಬ್ಬರು ಕ್ರಿಮಿನಲ್‌ಗಳ ಎನ್‌ಕೌಂಟರ್‌

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 13:51 IST
Last Updated 21 ನವೆಂಬರ್ 2022, 13:51 IST
.
.   

ಲಖನೌ: ಬಿಹಾರದ ಪಟ್ನಾ ಜೈಲಿನಿಂದ ಪರಾರಿಯಾಗಿದ್ದ ಸಂಸ್ತೀಪುರದ ಇಬ್ಬರು ಕ್ರಿಮಿನಲ್‌ ಸಹೋದರರನ್ನು ಉತ್ತರ ಪ್ರದೇಶದ ಪೊಲೀಸರು ವಾರಾಣಸಿಯಲ್ಲಿ ಎನ್‌ಕೌಂಟರ್ ಮಾಡಿದ್ದಾರೆ ಎಂದು ವಾರಾಣಸಿ ಪೊಲೀಸ್‌ ಕಮಿಷನರ್ ಸತೀಶ್‌ ಗಣೇಶ್‌ ಸೋಮವಾರ ತಿಳಿಸಿದ್ದಾರೆ.

ರಜನೀಶ್‌ ಅಲಿಯಾಸ್ ಬರುವಾ ಮತ್ತು ಮನೀಶ್‌ ಅವರು ಬಡಗಾಂನ್‌ ಪ್ರದೇಶದಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಅವರ ಸರ್ವಿಸ್‌ ಪಿಸ್ತೂಲ್‌ ಅನ್ನು ಲೂಟಿ ಮಾಡಿದ ಆರೋಪಿಗಳಾಗಿದ್ದು, ಬಿಹಾರ ಜೈಲಿನಿಂದ ತಪ್ಪಿಸಿಕೊಂಡಿದ್ದರು. ಇವರ ಹುಡುಕಾಟದಲ್ಲಿದ್ದ ಪೊಲೀಸರಿಗೆ ಇವರು ವಾರಾಣಸಿಯಲ್ಲಿರುವ ಮಾಹಿತಿ ದೊರೆತಿದ್ದು, ಸ್ಥಳಕ್ಕೆ ತೆರಳಿದಾಗಿ ಪೊಲೀಸರು ಹಾಗೂ ಆರೋಪಿಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ಇದರಲ್ಲಿ ಆರೋಪಿಗಳಾದ ರಜನೀಶ್ ಹಾಗೂ ಮನೀಶ್ ಎನ್‌ಕೌಂಟರ್‌ಗೆ ಬಲಿಯಾದರೆ, ಇವರ ಇನ್ನೊಬ್ಬ ಸಹೋದರ ಲಲ್ಲನ್‌ ಸ್ಥಳದಿಂದ ಪರಾರಿಯಾದ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT