ADVERTISEMENT

ಸಂಕಷ್ಟದಲ್ಲಿ ಭಾರತದ 200 ಯಾತ್ರಿಗಳು

ನೇಪಾಳದಲ್ಲಿ ಪ್ರತಿಕೂಲ ಹವಾಮಾನ

ಪಿಟಿಐ
Published 5 ಆಗಸ್ಟ್ 2018, 18:26 IST
Last Updated 5 ಆಗಸ್ಟ್ 2018, 18:26 IST

ಕಠ್ಮಂಡು :ಕೈಲಾಸ–ಮಾನಸ ಸರೋವರ ಯಾತ್ರೆಯಿಂದ ಹಿಂದಿರುಗುತ್ತಿದ್ದ ಭಾರತದ 200 ಮಂದಿ ಯಾತ್ರಿಗಳು ಹವಾಮಾನ ವೈಪರೀತ್ಯದ ಪರಿಣಾಮ ನೇಪಾಳದ ಹುಮ್ಲಾ ಜಿಲ್ಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಇಲ್ಲಿನ ಭಾರತದ ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ.

ನೇಪಾಳ–ಟಿಬೆಟ್‌ ಗಡಿಯಲ್ಲಿರುವ ಸಿಮಿಕೋಟ್‌ನಲ್ಲಿ 150 ಹಾಗೂ ಹಿಲ್ಸಾ ಎಂಬಲ್ಲಿ 50 ಯಾತ್ರಿಗಳು ಸಿಲುಕಿದ್ದಾರೆ. ಪ್ರತಿಕೂಲ ಹವಾಮಾನದ ಕಾರಣ ಈ ಯಾತ್ರಿಗಳನ್ನು ವಿಮಾನ ಮೂಲಕ ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT