ADVERTISEMENT

26 ಮಂದಿ ಬಾಲಕಾರ್ಮಿಕರ ರಕ್ಷಣೆ

ಪಿಟಿಐ
Published 15 ಜೂನ್ 2019, 20:15 IST
Last Updated 15 ಜೂನ್ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯ್‌ಪುರ: ಇಲ್ಲಿನ ಆಮಾಸಿವನೀ ಪ್ರದೇಶದಲ್ಲಿರುವ ಹೆಸರಾಂತ ಬಿಸ್ಕೆಟ್‌ ಉತ್ಪಾದನಾ ಕಾರ್ಖಾನೆ ‘ಪಾರ್ಲೆ–ಜಿ’ಯಲ್ಲಿ ಕೆಲಸ ಮಾಡುತ್ತಿದ್ದ 26 ಮಂದಿ ಬಾಲ ಕಾರ್ಮಿಕರನ್ನು ಶನಿವಾರ ಸರ್ಕಾರದ ಕಾರ್ಯಪಡೆ ರಕ್ಷಿಸಿದೆ.

ಖಚಿತ ಮಾಹಿತಿ ಆಧರಿಸಿ ಶುಕ್ರವಾರ ಸಂಜೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ವಿಧಾನಸಭಾ ಠಾಣೆಯ ಅಧಿಕಾರಿ ಆಶ್ವನಿ ರಾಥೋಡ್‌ ಹೇಳಿದ್ದಾರೆ.

ರಕ್ಷಿಸಲಾದ ಮಕ್ಕಳನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಈ ಎಲ್ಲರೂ 13 ರಿಂದ 17ವರ್ಷ ವಯಸ್ಸಿನವರು ಎಂದು ತಿಳಿಸಿದ್ದಾರೆ. ಕಾರ್ಖಾನೆ ಆಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.