ಮುಂಬೈ: ತೌತೆ ಚಂಡಮಾರುತ ಹೊಡೆತಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಿರುವ ಪಿ305 ಬಾರ್ಜ್ನಲ್ಲಿದ್ದವರ ಪೈಕಿ 15 ಜನರು ಹಾಗೂ ವರಪ್ರದ ಬೋಟ್ನಲ್ಲಿದ್ದವರ ಪೈಕಿ 11 ಜನರಿಗಾಗಿ ಶೋಧ ಕಾರ್ಯ ಶನಿವಾರವೂ ಮುಂದುವರಿದಿದೆ.
ಶುಕ್ರವಾರ 11 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ರಕ್ಷಣಾ ಮತ್ತು ಶೋಧ ಕಾರ್ಯವನ್ನು ಚುರುಕುಗೊಳಿಸಿರುವ ನೌಕಾಪಡೆ, ಮುಳುಗು ತಜ್ಞರನ್ನು ನಿಯೋಜಿಸಿದೆ.
‘ಪಿ 305 ಹಾಗೂ ವರಪ್ರದ ಬೋಟ್ನಲ್ಲಿದ್ದವರ ಪೈಕಿ ಒಟ್ಟು 26 ಜನರ ಪತ್ತೆಗಾಗಿ ಎಲ್ಲ ಪ್ರಯತ್ನಗಳೂ ಮುಂದುವರಿದಿವೆ. ಮುಳುಗು ತಜ್ಞರನ್ನು ಹೊತ್ತ ಐಎನ್ಎಸ್ ಮಕರ್ ಹಾಗೂ ಐಎನ್ಎಸ್ ತರಸ್ ಹಡಗುಗಳು ಇಂದು ಬೆಳಿಗ್ಗೆ ಮುಂಬೈನಿಂದ ತೆರಳಿದ್ದು, ಶೋಧಕಾರ್ಯವನ್ನು ಮುಂದುವರಿಸಲಾಗಿದೆ’ ಎಂದು ನೌಕಾಪಡೆಯ ವಕ್ತಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.