ನವದೆಹಲಿ (ಪಿಟಿಐ):ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸಿದ್ದರ ವಿರುದ್ಧ ಎಎಪಿ ಬಂಡಾಯ ಶಾಸಕ ದೇವೇಂದರ್ ಸೆಹ್ರಾವತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಅನರ್ಹತೆಯ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುವ ವೇಳೆ ಶಾಸಕ ತನ್ನ ವಿರೋಧವನ್ನು ಸ್ಪೀಕರ್ ಎದುರು ವ್ಯಕ್ತಪಡಿಸಬಹುದು ಎಂದು ನ್ಯಾಯಾಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿದ್ದ ಪೀಠ ಹೇಳಿದೆ.
ಅರ್ಜಿ ವಿಚಾರಣೆಗೆ ಕೋರ್ಟ್ ಒಪ್ಪದಿದ್ದಾಗ, ಸೆಹ್ರಾವತ್ ತಮ್ಮ ಅರ್ಜಿಯನ್ನು ಹಿಂಪಡೆದರು. ‘ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ನಾನು ಪಡೆದಿಲ್ಲ. ಆದ್ದರಿಂದ ಅನರ್ಹತೆಯ ನೋಟಿಸ್ ನೀಡುವುದು ಕಾನೂನು ಬಾಹಿರ’ ಎಂದು ವಾದಿಸಿದ್ದರು.
ಸೆಹ್ರಾವತ್ ಅವರೊಂದಿಗೆ ಮತ್ತೊಬ್ಬ ಎಎಪಿ ಶಾಸಕ ಅನಿಲ್ ಬಾಜಪೈ ಅವರಿಗೂ ಬಿಜೆಪಿ ಸೇರಿರುವುದಕ್ಕೆಪಕ್ಷಾಂತರ ನಿಷೇಧ ಕಾಯ್ದೆ ಅಡಿ ಪಕ್ಷದಿಂದ ಅನರ್ಹಗೊಳಿಸಲಾಗಿದೆ.
ಈ ಇಬ್ಬರು ಶಾಸಕರ ವಿರುಧಎಎಪಿ ವಕ್ತಾರ ಹಾಗೂ ಶಾಸಕ ಸೌರಭ್ ಭಾರದ್ವಾಜ್ ಅವರು ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.