ರಾಂಚಿ: ಜಾರ್ಖಂಡ್ನ ಗಿರಿಡಿಹ್ ಜಿಲ್ಲೆಯಲ್ಲಿ ಕೇಂದ್ರಿಯ ಮೀಸಲು ಪಡೆ (ಸಿಆರ್ಪಿಎಫ್) ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಮೂವರು ನಕ್ಸಲರು ಬಲಿಯಾಗಿದ್ದಾರೆ. ಇದೇ ವೇಳೆ ನಕ್ಸಲರ ಗುಂಡಿನ ದಾಳಿಗೆ ಸಿಆರ್ಪಿಎಫ್ ಯೋಧರೊಬ್ಬರು ಹುತ್ಮಾತ್ಮರಾಗಿದ್ದಾರೆ.
ಇಲ್ಲಿನ ಬೆಲ್ಬಾ ಘಾಟ್ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯಿತು. ಘಟನೆ ನಡೆದ ಸ್ಥಳದಿಂದ ಎಕೆ–47 ಬಂದೂಕು, ಮೂರು ನಿಯತಕಾಲಿಕೆಗಳು ಮತ್ತು ನಾಲ್ಕು ಪೈಪ್ ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಸಿಆರ್ಪಿಎಫ್ ಕಾನ್ಸ್ಸ್ಟೆಬಲ್ ಬಿಸ್ವಜಿತ್ ಚೌಹಾಣ್ ಅಸ್ಸಾಂನ ಉದಲ್ಗುಡಿ ಜಿಲ್ಲೆಯವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.