ADVERTISEMENT

ಅಮರನಾಥ ಯಾತ್ರೆ ವೇಳೆ ದಾಳಿಗೆ ಸಂಚು ರೂಪಿಸಿದ್ದ ಮೂವರು ಉಗ್ರರ ಹತ್ಯೆ

ಪಾಕಿಸ್ತಾನದ ಇಬ್ಬರು, ಒಬ್ಬ ಸ್ಥಳೀಯ ಉಗ್ರನ ಎನ್‌ಕೌಂಟರ್‌

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 13:42 IST
Last Updated 14 ಜೂನ್ 2022, 13:42 IST
ಸಾಂದರ್ಭಿಕ ಚಿತ್ರ  –ಪಿಟಿಐ
ಸಾಂದರ್ಭಿಕ ಚಿತ್ರ  –ಪಿಟಿಐ   

ಶ್ರೀನಗರ: ಅಮರನಾಥ ಯಾತ್ರೆ ವೇಳೆ ದಾಳಿಗೆ ಸಂಚು ರೂಪಿಸಿದ್ದ ಲಷ್ಕರ್‌–ಎ–ತೈಯಬಾ ಉಗ್ರ ಸಂಘಟನೆಯಇಬ್ಬರು ಸೇರಿದಂತೆ ಮೂವರು ಉಗ್ರರನ್ನು ಶ್ರೀನಗರದ ಬೆಮಿನಾದಲ್ಲಿ ಮಂಗಳವಾರ ಬೆಳಿಗ್ಗೆ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಜೂನ್‌ ಅಂತ್ಯದಿಂದ ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ದಾಳಿ ನಡೆಸುವ ಉದ್ದೇಶದಿಂದ ಪಾಕಿಸ್ತಾನ ಇವರನ್ನು ಕಳುಹಿಸಿತ್ತು’ ಎಂದು ಕಾಶ್ಮೀರ ಪೊಲೀಸ್‌ ಮಹಾನಿರ್ದೇಶಕ (ಐಜಿ‍ಪಿ) ವಿಜಯ್‌ ಕುಮಾರ್‌ ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

ಹತರಾದ ಉಗ್ರರನ್ನು ಅಬ್ದುಲ್ಲಾ ಗೌಜ್ರಿ, ಹಂಜಲ್ಲಾ ಮತ್ತುಸ್ಥಳೀಯ ಅನಂತ್‌ನಾಗ್‌ ಮೂಲದ ಆದಿಲ್‌ ಹುಸ್ಸೇನ್‌ ಮಿರ್‌ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಪೊಲೀಸ್‌ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.