ADVERTISEMENT

ಸ್ವಚ್ಛತಾ ಕಾರ್ಯ: 2017ರಿಂದ 400 ಮಂದಿ ಸಾವು

ಪಿಟಿಐ
Published 13 ಡಿಸೆಂಬರ್ 2022, 14:29 IST
Last Updated 13 ಡಿಸೆಂಬರ್ 2022, 14:29 IST
ರಾಮದಾಸ್‌ ಆಠವಲೆ
ರಾಮದಾಸ್‌ ಆಠವಲೆ   

ನವದೆಹಲಿ: 2017ರಿಂದೀಚೆಗೆ ಒಳಚರಂಡಿ ಹಾಗೂ ಸೆಪ್ಟಿಕ್‌ ಟ್ಯಾಂಕ್‌ ಅನ್ನು ಸ್ವಚ್ಛಗೊಳಿಸುವ ವೇಳೆ ಸುಮಾರು 400 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ರಾಮದಾಸ್‌ ಆಠವಲೆ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.

‘ಒಳಚರಂಡಿ ಮತ್ತು ಸೆಪ್ಟಿಕ್‌ ಟ್ಯಾಂಕ್‌ಗಳಿಗೆ ಇಳಿದು ಸ್ವಚ್ಛತೆ ಮಾಡುವ ವೇಳೆ ಸಾವು ಸಂಬವಿಸಿದ ಯಾವುದೇ ಘಟನೆ ವರದಿಯಾಗಿಲ್ಲ’ ಎಂದು ತಿಳಿಸಿದರು.

2017ರಲ್ಲಿ 100, 2018ರಲ್ಲಿ 67, 2019ರಲ್ಲಿ 117, 2020ರಲ್ಲಿ 19, 2021ರಲ್ಲಿ 49 ಹಾಗೂ 2022ರಲ್ಲಿ 48 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.