ADVERTISEMENT

ಶ್ರೀನಗರದಲ್ಲಿ ಹಿಮಕುಸಿತ: ಹನ್ನೊಂದು ಸಾವು

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST

ಶ್ರೀನಗರ: ಹಿಮಕುಸಿತದಲ್ಲಿ ಸಿಲುಕಿ ಮೃತಪಟ್ಟ ಹನ್ನೊಂದು ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಪ್ವಾರಾ–ತಂಗಧರ್‌ ರಸ್ತೆಯ ಖೂನಿ ನಲ್ಲಾಹ್‌ ಬಳಿ ಶುಕ್ರವಾರ ಸಂಭವಿಸಿದ ಹಿಮಕುಸಿತದಲ್ಲಿ ಪ್ರಯಾಣಿಕ ವಾಹನವೊಂದು ಸಿಲುಕಿತ್ತು. ಮೂವರನ್ನು ರಕ್ಷಿಸಿದ್ದ ಪೊಲೀಸರು, ನಾಪತ್ತೆಯಾದವರ ಶೋಧ ಕಾರ್ಯ ನಡೆಸಿದ್ದರು. ಒಂದು ಮೃತ ದೇಹವನ್ನು ಶುಕ್ರವಾರವೇ ಹೊರತೆಗೆಯಲಾಗಿತ್ತು. ಶನಿವಾರ ಹತ್ತು ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಕುಪ್ವಾರಾ ಉಪಆಯುಕ್ತ ಖಲಿದ್ ಜಹಾಂಗೀರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT