ADVERTISEMENT

ಬಡಜನ, ಬುಡಕಟ್ಟು ಕಲೆಗಳಲ್ಲಿ ಸೇವೆ ಸಲ್ಲಿಸಿದ ‘ಎಲೆ ಮರೆಯ ನಾಯಕರಿಗೆ' ಪದ್ಮಶ್ರೀ ಪುರಸ್ಕಾರ

ಪಿಟಿಐ
Published 25 ಜನವರಿ 2018, 17:22 IST
Last Updated 25 ಜನವರಿ 2018, 17:22 IST
ಇಬ್ರಾಹಿಂ ಸುತಾರ
ಇಬ್ರಾಹಿಂ ಸುತಾರ   

ನವದೆಹಲಿ: ಸಾಧಕರಿಗೆ ಗೌರವಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಡವರಿಗೆ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದೆ. ಜಾಗತಿಕಮಟ್ಟದಲ್ಲಿ ಉಚಿತ ಶಾಲೆಗಳು ಮತ್ತು ಜನಪ್ರಿಯ ಬುಡಕಟ್ಟು ಕಲೆಗಳನ್ನು ಸ್ಥಾಪಿಸಿದ ವ್ಯಕ್ತಿಗಳಿಗೆ ಈ ಗೌರವ ಸಂದಿದೆ.

ಮೂವರಿಗೆ ಪದ್ಮವಿಭೂಷಣ, ಒಂಬತ್ತು ಸಾಧಕರಿಗೆ ಪದ್ಮಭೂಷಣ, 73 ಪ್ರತಿಭೆಗಳಿಗೆ ಪದ್ಮಶ್ರೀ ಪ್ರಕಟಿಸಲಾಗಿದೆ. 2018ನೇ ಸಾಲಿಗೆ ಒಟ್ಟು 85 ಮಂದಿಗೆ ಗುರುವಾರ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 

ಕರ್ನಾಟಕದ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ADVERTISEMENT

ಎರಡು ಜೀವಗಳನ್ನು ಕಾಪಿಡುವ ಸೂಲಗಿತ್ತಿಯ ಕೆಲಸ. ಅಂದರೆ, ಆ ಜೀವಗಳಿಗೆ ಉಸಿರು ತುಂಬುವ ಮೂಲಕ ಮರುಜನ್ಮ ನೀಡುವುದೇ ಆಗಿರುವ ಆ ಕಾಯಕದಲ್ಲಿ ತೊಡಿಗದ್ದ ನರಸಮ್ಮಗೆ ಈ ಪುರಸ್ಕಾರ ಸಂದಿದೆ.

2013ರ ‘ವಯೋಶ್ರೇಷ್ಠ ಸಮ್ಮಾನ್‌’ ರಾಷ್ಟ್ರೀಯ ಪ್ರಶಸ್ತಿ ಪಡೆದ ಸೂಲಗಿತ್ತಿ ನರಸಮ್ಮ ಎಂಬ ಅಪ್ಪಟ ಗ್ರಾಮೀಣ ಪ್ರತಿಭೆ 1500ಕ್ಕೂ ಹೆಚ್ಚು ಹೆರಿಗೆ ಮಾಡಿಸಿ, ಜೀವಗಳಿಗೆ ಉಸಿರು ತುಂಬಿಸುವ ಕಾಯಕ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.