ADVERTISEMENT

ಕೇರಳ ಮಹಾ ಮಳೆ: ಸತ್ತವರ ಸಂಖ್ಯೆ 76ಕ್ಕೆ ಏರಿಕೆ, 58 ಮಂದಿ ನಾಪತ್ತೆ

ವಯನಾಡ್‌ನಲ್ಲಿ ಪರಿಹಾರ ಸಾಮಗ್ರಿ ವಿತರಿಸಿದ ರಾಹುಲ್ ಗಾಂಧಿ

ಏಜೆನ್ಸೀಸ್
Published 12 ಆಗಸ್ಟ್ 2019, 7:24 IST
Last Updated 12 ಆಗಸ್ಟ್ 2019, 7:24 IST
ವಯನಾಡ್‌ನಲ್ಲಿ ಪರಿಹಾರ ಶಿಬಿರಗಳಿಗೆ ತೆರಳಿದ ರಾಹುಲ್ ಗಾಂಧಿ ಪ್ರವಾಹಪೀಡಿತರಿಗೆ ಸಾಂತ್ವನ ಹೇಳಿದರು – ಎಎನ್‌ಐ ಚಿತ್ರ
ವಯನಾಡ್‌ನಲ್ಲಿ ಪರಿಹಾರ ಶಿಬಿರಗಳಿಗೆ ತೆರಳಿದ ರಾಹುಲ್ ಗಾಂಧಿ ಪ್ರವಾಹಪೀಡಿತರಿಗೆ ಸಾಂತ್ವನ ಹೇಳಿದರು – ಎಎನ್‌ಐ ಚಿತ್ರ   

ತಿರುವನಂತಪುರ:ರಾಜ್ಯದಲ್ಲಿ ಮಳೆ, ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಆಗಸ್ಟ್ 8ರಿಂದ 11ರವರೆಗೆ ರಾಜ್ಯದಲ್ಲಿ ಮಳೆ, ಪ್ರವಾಹ ಸಂಬಂಧಿ ಅವಘಡಗಳಲ್ಲಿ 76 ಜನ ಮೃತಪಟ್ಟಿದ್ದಾರೆ. 58 ಜನ ನಾಪತ್ತೆಯಾಗಿದ್ದು, 32 ಮಂದಿ ಗಾಯಗೊಂಡಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ತಿಳಿಸಿದೆ.

ಈ ಮಧ್ಯೆ, ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಜಿಲ್ಲೆಗೆ ಆಗಮಿಸಿದ್ದು, ಪರಿಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.

ADVERTISEMENT

ಕೈಥಪೋಯಿಲ್‌ನ ಶಿಬಿರದಲ್ಲಿಪರಿಹಾರ ಸಾಮಗ್ರಿ ವಿತರಣೆ ವೇಳೆ ಮಾತನಾಡಿದ ರಾಹುಲ್, ‘ನಿಮ್ಮ ಸಂಸದನಾಗಿ ಮುಖ್ಯಮಂತ್ರಿಯವರಿಗೆ ಕರೆ ಮಾಡಿ ಎಷ್ಟು ಸಾಧ್ಯವೋ ಅಷ್ಟು ಗರಿಷ್ಠ ಪ್ರಮಾಣದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದೇನೆ. ಪ್ರಧಾನ ಮಂತ್ರಿಯವರಿಗೂ ಕರೆ ಮಾಡಿ ಮಾತನಾಡಿದ್ದು ಇಲ್ಲಿನ ದುರಂತದ ಬಗ್ಗೆ ವಿವರಿಸಿದ್ದೇನೆ. ಕೇಂದ್ರ ಸರ್ಕಾರದ ನೆರವನ್ನು ಕೋರಿದ್ದೇನೆ’ ಎಂದು ತಿಳಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.