ADVERTISEMENT

370ನೇ ವಿಧಿ ರದ್ದತಿ ನಂತರದ ಕಲ್ಲು ತೂರಾಟ ಪ್ರಕರಣ: 765 ಜನರ ಬಂಧನ

ಜಮ್ಮು–ಕಾಶ್ಮೀರ

ಏಜೆನ್ಸೀಸ್
Published 19 ನವೆಂಬರ್ 2019, 15:08 IST
Last Updated 19 ನವೆಂಬರ್ 2019, 15:08 IST
   

ನವದೆಹಲಿ: ‌370ನೇ ವಿಧಿ ರದ್ದತಿ ನಂತರ ಜಮ್ಮು–ಕಾಶ್ಮೀರದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಗಳಲ್ಲಿ 765 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಖಾತೆಯ ರಾಜ್ಯ ಸಚಿವ ಜಿ ಕಿಶನ್‌ ರೆಡ್ಡಿ ಅವರು ತಿಳಿಸಿದ್ದಾರೆ.

ಮಂಗಳವಾರ ನಡೆದ ಸಂಸತ್‌ ಕಲಾಪ ಉದ್ದೇಶಿಸಿ ಮಾತನಾಡಿದ ಅವರು, ’ಆಗಸ್ಟ್ 5 ರಿಂದ ನವೆಂಬರ್‌ 15ರವರೆಗೆ ನಡೆದ ಕಲ್ಲು ತೂರಾಟದಂತಹ ಘಟನೆಗಳಿಗೆ ಸಂಬಂಧಿಸಿದಂತೆ 765 ಜನರನ್ನು ಬಂಧಿಸಲಾಗಿದ್ದು, 190 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಉಲ್ಲಂಘಿಸಿದ್ದಕ್ಕಾಗಿ ಜನೆವರಿ 1, 2019 ರಿಂದ ಆಗಷ್ಟ್ 4, 2019 ರವರೆಗೆ 361 ಪ್ರಕರಣಗಳು ದಾಖಲಾಗಿವೆ,’ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಕುರಿತು ಪ್ರತಿಕ್ರಿಯಿಸಿರುವ ರೆಡ್ಡಿ ಕಿಶನ್‌ ಅವರು, ’ಪಾಕಿಸ್ತಾನವು ಆಗಸ್ಟ್ ಮತ್ತು ಅಕ್ಟೋಬರ್‌ ತಿಂಗಳುಗಳಲ್ಲಿ ಒಟ್ಟು 950 ಸಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ,’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.