ADVERTISEMENT

ಮೂರು ವರ್ಷದಲ್ಲಿ 9 ಕಾಶ್ಮೀರಿ ಪಂಡಿತರ ಹತ್ಯೆ

ಪಿಟಿಐ
Published 14 ಡಿಸೆಂಬರ್ 2022, 14:31 IST
Last Updated 14 ಡಿಸೆಂಬರ್ 2022, 14:31 IST
ನಿತ್ಯಾನಂದ ರೈ
ನಿತ್ಯಾನಂದ ರೈ   

ನವದೆಹಲಿ: ಜಮ್ಮು–ಕಾಶ್ಮೀರದಲ್ಲಿ 2020ರಿಂದ ಈವರೆಗೆ 9 ಕಾಶ್ಮೀರಿ ಪಂಡಿತರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ ಎಂದು ಬುಧವಾರ ರಾಜ್ಯಸಭೆಯಲ್ಲಿಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದರು.

2021 ಮತ್ತು2022ರಲ್ಲಿ ತಲಾ ನಾಲ್ಕು ಮಂದಿ ಮತ್ತು 2020ರಲ್ಲಿ ಒಬ್ಬ ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಲಾಗಿದೆ ಎಂದರು.

ಕಳೆದ ಮೂರು ವರ್ಷದಲ್ಲಿ ಜಮ್ಮು–ಕಾಶ್ಮೀರದ ಭದ್ರತೆಗಾಗಿ ಕೇಂದ್ರ ಸರ್ಕಾರ ₹2,815 ಕೋಟಿ ವೆಚ್ಚ ಮಾಡಿದೆ. 2019–20ರಲ್ಲಿ ₹1,267 ಕೋಟಿ, 2020–21ರಲ್ಲಿ ₹611 ಕೋಟಿ ಮತ್ತು 2021–22ರಲ್ಲಿ ₹936.095 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.