ಭೋಪಾಲ್: ಮಧ್ಯಪ್ರದೇಶದ ಜಬಲ್ಪುರದಲ್ಲಿ ಶನಿವಾರ ರಾಹುಲ್ ಗಾಂಧಿ ರ್ಯಾಲಿ ನಡೆಯುತ್ತಿದ್ದ ವೇಳೆ ಆರತಿ ಭಗ್ಗನೆ ಉರಿದು ಆತಂಕ ಸೃಷ್ಟಿಸಿತ್ತು.ನವೆಂಬರ್ 28ಕ್ಕೆ ಇಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ರ್ಯಾಲಿ ಮಧ್ಯೆ ಕಾಂಗ್ರೆಸ್ಬೆಂಬಲಿಗರು ಆರತಿ ತೆಗೆದುಕೊಂಡು ಬಂದಾಗ ಅದು ಭಗ್ಗನೆ ಉರಿದು ಅಲ್ಲಿದ್ದ ಗ್ಯಾಸ್ ಬಲೂನ್ಗಳನ್ನು ಸುಟ್ಟುಹಾಕಿದೆ.ಕೆಲವೇ ಸೆಕೆಂಡ್ಗಳಲ್ಲಿ ಹೊತ್ತಿ ಉರಿದ ಬೆಂಕಿ ಕಂಡು ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರು ಭಯಭೀತರಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.