ADVERTISEMENT

ಕೇರಳ: ನಾಪತ್ತೆಯಾಗಿದ್ದ ಪಿಎಫ್‌ಐ ಸದಸ್ಯನ ಬಂಧನ

​ಪ್ರಜಾವಾಣಿ ವಾರ್ತೆ
Published 17 ಮೇ 2023, 20:22 IST
Last Updated 17 ಮೇ 2023, 20:22 IST
.
.   

ನವದೆಹಲಿ (ಪಿಟಿಐ): ‘2022ರಲ್ಲಿ ನಡೆದ ಆರ್‌ಎಸ್‌ಎಸ್‌ ನಾಯಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಬೇಕಾಗಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಸದಸ್ಯನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ’ ಎಂದು ಎನ್‌ಐಎ ವಕ್ತಾರರೊಬ್ಬರು ಬುಧವಾರ ತಿಳಿಸಿದರು.

‘ಸಹೀರ್‌ ಕೆ.ವಿ. ಬಂಧಿತ ವ್ಯಕ್ತಿ. 2022ರ ಏಪ್ರಿಲ್ 16ರಂದು ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಆರ್‌ಎಸ್‌ಎಸ್‌ ನಾಯಕನೊಬ್ಬನ ಹತ್ಯೆಯಾದ ಬಳಿಕ ಈತ ನಾಪತ್ತೆಯಾಗಿದ್ದ. ಈತನನ್ನು ಹಿಡಿದುಕೊಟ್ಟವರಿಗೆ ₹ 4 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿತ್ತು’ ಎಂದು ಅವರು ಹೇಳಿದರು.

‘ಸಹೀರ್‌ ಬಂಧನ ಪ್ರಕರಣದ ಪ್ರಮುಖ ತಿರುವು’ ಎಂದು ತನಿಖಾ ಸಂಸ್ಥೆಯ ಫ್ಯುಜಿಟಿವ್‌ ಟ್ರ್ಯಾಕಿಂಗ್‌ ತಂಡ (ಎಫ್‌ಟಿಟಿ) ಪ್ರತಿಪಾದಿಸಿದೆ. ಸಹೀರ್‌, ಪಾಲಕ್ಕಾಡ್‌ನ ತನ್ನ ಸಂಬಂಧಿಕರ ಮನೆಯಲ್ಲಿ ಇರುವುದನ್ನು ಪತ್ತೆಹಚ್ಚಿದ ಎಫ್‌ಟಿಟಿ ಆತನನ್ನು ಬಂಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.