ADVERTISEMENT

ಅಹಮದಾಬಾದ್ ಆಸ್ಪತ್ರೆಗೆ ಬೆಂಕಿ: ಆಡಳಿತಾಧಿಕಾರಿ ಬಂಧನ

ಅಗ್ನಿ ಅವಘಡಕ್ಕೆ ನಿರ್ಲಕ್ಷ್ಯವೇ ಕಾರಣ

ಪಿಟಿಐ
Published 12 ಆಗಸ್ಟ್ 2020, 16:04 IST
Last Updated 12 ಆಗಸ್ಟ್ 2020, 16:04 IST
ಅಗ್ನಿ ಅವಘಡ ಸಂಭವಿಸಿದ ಅಹಮದಾಬಾದ್‌ನ ಶ್ರೇಯ್ ಆಸ್ಪತ್ರೆ –ಎಎಫ್‌ಪಿ ಚಿತ್ರ
ಅಗ್ನಿ ಅವಘಡ ಸಂಭವಿಸಿದ ಅಹಮದಾಬಾದ್‌ನ ಶ್ರೇಯ್ ಆಸ್ಪತ್ರೆ –ಎಎಫ್‌ಪಿ ಚಿತ್ರ   

ಅಹಮದಾಬಾದ್:ಇಲ್ಲಿನ ಶ್ರೇಯ್ ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 8 ಕೋವಿಡ್‌ ರೋಗಿಗಳು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಆಡಳಿತಾಧಿಕಾರಿ ಭಾರತ್ ಮಹಂತ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.

ಐಸಿಯು ವಾರ್ಡ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಅಲ್ಲಿ ಯಾವುದೇ ಫೈರ್ ಅಲಾರಾಂ ಕೂಡ ಇರಲಿಲ್ಲ. ವಾರ್ಡ್‌ನಲ್ಲಿದ್ದ ಕಿಟಕಿಗಳಿಗೆ ಮೊಳೆ ಹೊಡೆಯಲಾಗಿತ್ತು. ಆದ್ದರಿಂದ ಕೋವಿಡ್ ರೋಗಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಸ್ಪತ್ರೆಯ ಆಡಳಿತಾಧಿಕಾರಿ ವಿರುದ್ಧ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಎಂ.ಎ. ಪಟೇಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT