ADVERTISEMENT

ಭೂ ಕಬಳಿಕೆ ಆರೋಪ ರಾಜಕೀಯ ಪಿತೂರಿ: ಅಜಿತ್‌ ಪವಾರ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 16:10 IST
Last Updated 9 ನವೆಂಬರ್ 2025, 16:10 IST
ಅಜಿತ್‌ ಪವಾರ್‌
ಅಜಿತ್‌ ಪವಾರ್‌   

ಮುಂಬೈ: ‘ಚುನಾವಣೆ ಬಂದಾಗಲೆಲ್ಲ ನನ್ನ ಮೇಲೆ ಆರೋಪಗಳು ಬರುತ್ತವೆ. ಇದು ರಾಜಕೀಯ ಪಿತೂರಿ’ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಹೇಳಿದ್ದಾರೆ. 

ಪುಣೆಯ ಮುಂಧ್ವಾ ಪ್ರದೇಶದಲ್ಲಿರುವ ಸುಮಾರು ₹1,800 ಕೋಟಿ ಮೌಲ್ಯದ  40 ಎಕರೆ ಜಮೀನನ್ನು ಅಜಿತ್‌ ಪವಾರ್‌ ಅವರ ಪುತ್ರ, ಪಾರ್ಥ್‌ ಪವಾರ್‌ ಒಡೆತನದ ಕಂಪನಿಯು, ಮುದ್ರಾಂಕ ಶುಲ್ಕವನ್ನು ವಂಚಿಸಿ, ಕೇವಲ ₹300 ಕೋಟಿಗೆ ಅಕ್ರಮವಾಗಿ ಖರೀದಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದು,  ‘ಮಹಾ ವಿಕಾಸ್‌ ಅಘಾಡಿ’ ಮೈತ್ರಿಕೂಟವು ಪವಾರ್‌ ರಾಜೀನಾಮೆಗೆ ಒತ್ತಾಯಿಸಿದೆ.  

‘ಈ  ಹಿಂದೆಯೂ  ₹70 ಸಾವಿರ ಕೋಟಿ ಮೊತ್ತದ ನೀರಾವರಿ ಯೋಜನೆಯ ಅಕ್ರಮದಲ್ಲಿ ನನ್ನ ಹೆಸರನ್ನು ಎಳೆದು ತರಲಾಗಿತ್ತು.  ಇದೀಗ ಸ್ಥಳೀಯ ಸಂಸ್ಥೆಗಳ  ಚುನಾವಣೆ ಬೆನ್ನಲ್ಲೇ, ಈ ಆರೋಪ ಹೊರಿಸಲಾಗಿದೆ. ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಪವಾರ್‌  ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.