ADVERTISEMENT

ಮುಲಾಯಂ ಸಿಂಗ್‌ ಕುರಿತ ದಿನದರ್ಶಿಕೆ ಬಿಡುಗಡೆಗೊಳಿಸಿದ ಅಖಿಲೇಶ್‌

ಐಎಎನ್ಎಸ್
Published 12 ಜನವರಿ 2023, 9:46 IST
Last Updated 12 ಜನವರಿ 2023, 9:46 IST
   

ಲಖನೌ: ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌, ಪಕ್ಷದ ಸಂಸ್ಥಾಪಕ ಹಾಗೂ ತಮ್ಮ ತಂದೆ ದಿವಗಂತ ಮುಲಾಯಂ ಸಿಂಗ್‌ ಅವರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

ಸಮಾಜವಾದಿ ಚಳುವಳಿಯ ಇತಿಹಾಸ ಮತ್ತು ಚಿಂತನೆಗಳನ್ನು ಕ್ಯಾಲೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ.

ಮುಲಾಯಂ ಸಿಂಗ್‌ಗೆ ಸಂಬಂಧಿತ ಘಟನೆಗಳನ್ನು ಚಿತ್ರಗಳೊಂದಿಗೆ ಪ್ರದರ್ಶಿಸಲಾಗಿದೆ. 12 ಪುಟಗಳ ಕ್ಯಾಲೆಂಡರ್‌ ಅನ್ನು ಮುಲಾಯಂ ಸಿಂಗ್‌ ಬದುಕಿನ ಪಯಣಕ್ಕಾಗಿಯೇ ಮೀಸಲಿಡಲಾಗಿದೆ.

ADVERTISEMENT

ಸಮಾಜವಾದಿ ಪಕ್ಷದ ಸಂಸ್ಥಾಪಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ, ಅ.10, 2022ರಂದು ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.