ADVERTISEMENT

ಆಂಧ್ರಪ್ರದೇಶ ಅಬಕಾರಿ ಹಗರಣ: ಆರೋಪಪಟ್ಟಿಯಲ್ಲಿ ಜಗನ್‌ ಹೆಸರು

ಪಿಟಿಐ
Published 20 ಜುಲೈ 2025, 15:48 IST
Last Updated 20 ಜುಲೈ 2025, 15:48 IST
<div class="paragraphs"><p>ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ</p></div>

ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ

   

ಅಮರಾವತಿ: ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ನಡೆದ  ₹3,500 ಕೋಟಿ ಮೊತ್ತದ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಪೊಲೀಸರು ಶನಿವಾರ 305 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ರಾಜಶೇಖರ ರೆಡ್ಡಿಯೇ ಈ ಪ್ರಕರಣದ ಸೂತ್ರಧಾರ ಮತ್ತು ಸಹ ಸಂಚುಕೋರ ಎಂದು ಆರೋಪಿಸಲಾಗಿದೆ. 

ಮಾಜಿ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರೂ ಈ ಹಗರಣದ ಫಲಾನುಭವಿ ಆಗಿದ್ದು, ಪ್ರತಿ ತಿಂಗಳು ಸರಾಸರಿ ₹50 ಕೋಟಿಯಿಂದ ₹60 ಕೊಟಿಯಷ್ಟು ಲಂಚ ಪಡೆದಿದ್ದಾರೆ ಎಂದು ದೋಷಾರೋಪಣ ಪಟ್ಟಿಯಲ್ಲಿ ಆರೋಪಿಸಲಾಗಿದೆ. ಆದರೆ, ಅವರನ್ನು ಆರೋಪಿ ಎಂದು ಹೆಸರಿಸಿಲ್ಲ.

ADVERTISEMENT

2019–24ರ ವೈಎಸ್‌ಆರ್‌ ಕಾಂಗ್ರೆಸ್‌ ಅವಧಿಯಲ್ಲಿ, ಅಬಕಾರಿ ನೀತಿ ದುರ್ಬಳಕೆ ಮಾಡಿಕೊಳ್ಳುವ ಮೂಲಕ  ಪ್ರತಿ ತಿಂಗಳು ಸರಾಸರಿ ₹50 ರಿಂದ ₹60 ಕೋಟಿ  ಹಣವನ್ನು ಸಂಗ್ರಹಿಸಲಾಗುತ್ತಿತ್ತು.  ಡಿಜಿಟಲ್‌ ಪಾವತಿಗೆ ನಿರ್ಬಂಧ ಹೇರಿ,  ನಗದು ಮೂಲಕವಷ್ಟೇ ವಹಿವಾಟು ನಡೆಸಲಾಗುತ್ತಿತ್ತು. ಅಕ್ರಮವಾಗಿ ಸಂಗ್ರಹಿಸಿದ ಮೊತ್ತವನ್ನು ಕೆಸಿರೆಡ್ಡಿ ರಾಜಶೇಖರ್‌ ರೆಡ್ಡಿ ಸಂಗ್ರಹಿಸಿ, ಅದನ್ನು ವಿಜಯ್‌ ಸಾಯಿ ರೆಡ್ಡಿ , ಮಿಥುನ್‌ ರೆಡ್ಡಿ, ಬಾಲಾಜಿ ಅವರಿಗೆ ಹಸ್ತಾಂತರಿಸಿದ್ದರು. ಈ ಆರೋಪಿಗಳು ಮಾಜಿ ಮುಖ್ಯಮಂತ್ರಿ ವೆ.ಎಸ್‌. ಜಗನ್‌ ಮೋಹನ್ ರೆಡ್ಡಿ ಅವರಿಗೆ ವರ್ಗಾಯಿಸಿದ್ದರು. ಇದನ್ನು ಸಾಕ್ಷಿಗಳು ದೃಢೀಕರಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.