ADVERTISEMENT

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನ: ಮಾಜಿ ಸಚಿವ ರಾಮ್‌ ಬಾಬು ಬಂಧನ

ಪಿಟಿಐ
Published 1 ಫೆಬ್ರುವರಿ 2026, 13:26 IST
Last Updated 1 ಫೆಬ್ರುವರಿ 2026, 13:26 IST
<div class="paragraphs"><p>ರಾಮ್‌ ಬಾಬು</p></div>

ರಾಮ್‌ ಬಾಬು

   

ಗುಂಟೂರು: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ವೈಎಸ್‌ಆರ್‌ಸಿಪಿ ನಾಯಕ, ಮಾಜಿ ಸಚಿವ ಅಂಬಟಿ ರಾಮ್‌ ಬಾಬು ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಈ ನಡುವೆ, ಟಿಡಿಪಿ ನಾಯಕರು ಹಾಗೂ ಕಾರ್ಯಕರ್ತರು ರಾಮ್‌ ಬಾಬು ಅವರ ಮನೆ ಬಳಿ ಗಲಾಟೆ ಮಾಡಿದರಲ್ಲದೇ, ಮನೆ ಹಾಗೂ ಹಲವು ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ದೃಶ್ಯಗಳಿರುವ ವಿಡಿಯೊ ಹರಿದಾಡಿದೆ. 

ADVERTISEMENT

‘ರಾಮ್‌ಬಾಬು ಅವರ ಕೊಲೆಗೆ ಯತ್ನಿಸಲಾಗಿದೆ. ಟಿಡಿಪಿ ಬೆಂಬಲಿಗರ ದಾಂದಲೆ ಪರಿಣಾಮ ಅವರ ಜೀವಕ್ಕೆ ಬೆದರಿಕೆ ಇದೆ’ ಎಂದು ವೈಎಸ್‌ಆರ್‌ಸಿ ಪಕ್ಷದ ಮುಖ್ಯಸ್ಥ ಜಗನಮೋಹನ್‌ ರೆಡ್ಡಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.