ADVERTISEMENT

ಕಾಂಗ್ರೆಸ್‌ ಮುಖಂಡನ ಕೊಲೆ: ಬಿಎಸ್‌ಪಿ ಶಾಸಕಿ ಪತಿ ಬಂಧನಕ್ಕೆ ’ಸುಪ್ರೀಂ’ ಗಡುವು

ಪಿಟಿಐ
Published 28 ಮಾರ್ಚ್ 2021, 16:21 IST
Last Updated 28 ಮಾರ್ಚ್ 2021, 16:21 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಕಾಂಗ್ರೆಸ್‌ ಮುಖಂಡರೊಬ್ಬರ ಕೊಲೆ ಪ್ರಕರಣದ ಆರೋಪಿಯೂ ಆಗಿರುವ ಬಿಎಸ್‌ಪಿ ಶಾಸಕಿ ಪತಿಯನ್ನು ಏ. 5ರ ಒಳಗಾಗಿ ಬಂಧಿಸಿ. ತಪ್ಪಿದಲ್ಲಿ ಕಠಿಣ ಕ್ರಮ ಎದುರಿಸಿ ಎಂದು ಮಧ್ಯಪ್ರದೇಶ ಡಿಜಿಪಿಗೆಸುಪ್ರೀಂಕೋರ್ಟ್‌ ಎಚ್ಚರಿಕೆ ನೀಡಿದೆ.

ಶಾಸಕಿ ರಮಾಬಾಯಿ ಸಿಂಗ್‌ ಅವರ ಪತಿ ಗೋವಿಂದ್‌ ಸಿಂಗ್‌ ಅವರು, ಕಾಂಗ್ರೆಸ್‌ ಮುಖಂಡ ದೇವೇಂದ್ರ ಚೌರಾಸಿಯಾ ಕೊಲೆ ಪ್ರಕರಣದ ಆರೋಪಿ.

ಗೋವಿಂದ್‌ ಸಿಂಗ್‌ ಅವರಿಗೆ ಯಾವಾಗ ಮತ್ತು ಯಾವ ಕಾರಣಕ್ಕೆ ಭದ್ರತೆಯನ್ನು ಒದಗಿಸಲಾಗಿದೆ ಎಂಬ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಎಂ.ಆರ್.ಶಾ ಅವರಿರುವ ನ್ಯಾಯಪೀಠ ನಿರ್ದೇಶನ ನೀಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.