ADVERTISEMENT

ಪ್ರತಿಪಕ್ಷದ ಶಾಸಕರಿಗೆ ಬಿಜೆಪಿಗೆ ಸೇರಲು ಅಸ್ಸಾಂ ಮುಖ್ಯಮಂತ್ರಿ ಆಹ್ವಾನ

ಪಿಟಿಐ
Published 19 ಜೂನ್ 2021, 12:14 IST
Last Updated 19 ಜೂನ್ 2021, 12:14 IST
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ   

ಗುವಾಹಟಿ: ರಾಜ್ಯದ ಪ್ರತಿಪಕ್ಷದ ಶಾಸಕರು ಆಡಳಿತ ಪಕ್ಷವಾದ ಬಿಜೆಪಿಗೆ ಸೇರುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆಹ್ವಾನ ನೀಡಿದ್ದಾರೆ.

ನಾಲ್ಕು ಬಾರಿಯ ಕಾಂಗ್ರೆಸ್‌ ಶಾಸಕರಾಗಿದ್ದ ರೂಪಜ್ಯೋತಿ ಕುರ್ಮಿ ಅವರು ಬಿಜೆಪಿ ಸೇರುವುದಾಗಿ ಪ್ರಕಟಿಸಿದ ಮರು ದಿನವಾದ ಶನಿವಾರ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.

‘ವಿರೋಧ ಪಕ್ಷದಲ್ಲಿ ಐದು ವರ್ಷ ಇದ್ದು ಏನು ಮಾಡುತ್ತೀರಿ. ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ. ಜಾತಿ, ಧರ್ಮ, ಪ್ರದೇಶದ ತಾರತಮ್ಯಗಳನ್ನು ಬಿಟ್ಟು ಜನರ ಕಲ್ಯಾಣಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ನಮ್ಮೊಂದಿಗೆ ಸೇರಿ’ ಎಂದು ಮನವಿ ಮಾಡಿದರು.

ADVERTISEMENT

ಕುರ್ಮಿ ಅವರು ಸೋಮವಾರ ಬಿಜೆಪಿ ಸೇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.