ADVERTISEMENT

ಅಯೋಧ್ಯಾ ವಿವಾದ: ಇಂದು ವಿಚಾರಣೆ

ಪಿಟಿಐ
Published 5 ಮಾರ್ಚ್ 2019, 18:46 IST
Last Updated 5 ಮಾರ್ಚ್ 2019, 18:46 IST
   

ನವದೆಹಲಿ: ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ–ಬಾಬರಿ ಮಸೀದಿ ಜಮೀನು ವಿವಾದದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮಾರ್ಚ 6ರಂದು ನಡೆಸಲಿದೆ.

ರಾಜಕೀಯವಾಗಿ ಬಹುಸೂಕ್ಷ್ಮ ಎನಿಸಿರುವ ಈ ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಲು ಸಾಧ್ಯವೇ ಎಂಬುದರ ಪರಿಶೀಲನೆ ಹಾಗೂ ಸಂಧಾನಕಾರರೊಬ್ಬರನ್ನು ನೇಮಕ ಮಾಡುವ ಕುರಿತಂತೆ ಮಾರ್ಚ್‌ 6ರಂದು ಆದೇಶ ನೀಡುವುದಾಗಿ ಸುಪ್ರೀಂಕೋರ್ಟ್‌ ಫೆ. 26ರಂದು ನಡೆಸಿದ ವಿಚಾರಣೆ ವೇಳೆ ಹೇಳಿತ್ತು.

ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಒಟ್ಟು ಐದು ಜನ ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ADVERTISEMENT

ವಿವಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಉತ್ತರ ಪ್ರದೇಶ ಸರ್ಕಾರ ಭಾಷಾಂತರ ಮಾಡಿಸಿದೆ. ಈ ಪ್ರಕರಣದಲ್ಲಿ ಕೋರ್ಟ್‌ ಮೆಟ್ಟಿಲೇರಿರುವ ಹಿಂದೂ ಹಾಗೂ ಮುಸ್ಲಿಂ ಸಂಘಟನೆಗಳು ಭಾಷಾಂತರ ಮಾಡಲಾದ ದಾಖಲೆಗಳ ಸತ್ಯಾಸತ್ಯತೆ ಬಗ್ಗೆ ವಾಗ್ವಾದಕ್ಕಿಳಿದವು. ಆಗ, ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಬೊಬ್ಡೆ ಸಲಹೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.