ADVERTISEMENT

ಮಹಾರಾಷ್ಟ್ರ| ಭಾರತ ಜೋಡೊ ಯಾತ್ರೆಗೆ ಇಂದು ವಿರಾಮ: ನಾಳೆ ವಾಶಿಂ ಕಡೆಗೆ

ಪಿಟಿಐ
Published 13 ನವೆಂಬರ್ 2022, 11:15 IST
Last Updated 13 ನವೆಂಬರ್ 2022, 11:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಿಂಗೋಲಿ (ಮಹಾರಾಷ್ಟ್ರ): ಕಾಂಗ್ರೆಸ್ ಪಕ್ಷವು ಭಾನುವಾರ ‘ಭಾರತ ಜೋಡೊ’ ಯಾತ್ರೆಗೆ ಒಂದು ದಿನದ ಮಟ್ಟಿಗೆ ವಿರಾಮ ನೀಡಿದೆ. ಯಾತ್ರೆಯು ಸೋಮವಾರ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಲಾಮ್ನುರಿಯಿಂದ ಪುನರಾರಂಭವಾಗಿ ವಾಶಿಂ ಕಡೆಗೆ ಸಾಗಲಿದೆ.

ಇದಕ್ಕೂ ಮುನ್ನ ಶನಿವಾರ ಸಂಜೆ ಕಲಾಮ್ನುರಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ‍ಕಾಂಗ್ರೆಸ್‌ ಹಿರಿಯ ನಾಯಕ ರಾಹುಲ್ ಗಾಂಧಿ ಅವರು, ‘ಭಾರತವನ್ನು ವಿಭಜಿಸಲು ಸಾಧ್ಯವಿಲ್ಲ ಮತ್ತು ದ್ವೇಷವನ್ನು ಹರಡಲು ಅವಕಾಶ ನೀಡುವುದಿಲ್ಲ ಎಂಬುದೇ ಈ ನಡಿಗೆಯ ಸಂದೇಶ’ ಎಂದು ಹೇಳಿದರು.

ಭಾರತ ಜೋಡೊ ಯಾತ್ರೆಯು ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿ ಶನಿವಾರದ ವರೆಗೆ 66 ದಿನಗಳನ್ನು ಪೂರೈಸಿದೆ. ಈವರೆಗೆ 6 ರಾಜ್ಯಗಳ 28 ಜಿಲ್ಲೆಗಳಲ್ಲಿ ಯಾತ್ರೆಯು ಸಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.