ADVERTISEMENT

ಸನಾತನ ಧರ್ಮದ ಪ್ರಚಾರ: ಬಿಹಾರ ಸರ್ಕಾರದಿಂದ 38 ಸಂಚಾಲಕರ ನೇಮಕ

ಪಿಟಿಐ
Published 23 ನವೆಂಬರ್ 2025, 9:24 IST
Last Updated 23 ನವೆಂಬರ್ 2025, 9:24 IST
<div class="paragraphs"><p>ನಿತೀಶ್ ಕುಮಾರ್</p></div>

ನಿತೀಶ್ ಕುಮಾರ್

   

ಪಟ್ನಾ: ರಾಜ್ಯದಾದ್ಯಂತ ಸನಾತನ ಧರ್ಮವನ್ನು ಪ್ರಚಾರ ಮಾಡಲು ಎಲ್ಲ 38 ಜಿಲ್ಲೆಗಳಲ್ಲಿ ಸಂಚಾಲಕರನ್ನು ನೇಮಿಸಲು ನೂತನ ಸರ್ಕಾರ ಮುಂದಾಗಿದೆ. ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್‌ ಮಂಡಳಿ (ಬಿಎಸ್‌ಆರ್‌ಟಿಸಿ) ಅಡಿ ಬರುವ ದೇವಸ್ಥಾನಗಳ ಪ್ರಧಾನ ಅರ್ಚಕರನ್ನು ಸಂಚಾಲಕರನ್ನಾಗಿ ನೇಮಿಸಲಾಗುವುದು.

ಮಂಡಳಿ ಅಡಿ ಒಟ್ಟು 2,499 ದೇವಸ್ಥಾನಗಳು ಹಾಗೂ ಮಠಗಳು ನೋಂದಣಿಯಾಗಿವೆ. ಈ ಬಗ್ಗೆ ಭಾನುವಾರ ಮಾಹಿತಿ ನೀಡಿದ ಮಂಡಳಿಯ ಮುಖ್ಯಸ್ಥ ರಣಬೀರ್‌ ನಂದನ್‌, ‘ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಸಂಚಾಲಕರ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದರು.

ADVERTISEMENT

‘ಸನಾತನ ಧರ್ಮವನ್ನು ಪ್ರಚಾರ ಮಾಡಲು ಅಂತರರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಮುಂಬರುವ ತಿಂಗಳಲ್ಲಿ ರಾಜ್‌ಗೀರ್‌ನಲ್ಲಿ ಮಂಡಳಿ ವತಿಯಿಂದ ಆಯೋಜಿಸಲಾಗುವುದು. ಸನಾತನ ಧರ್ಮದ ಹಬ್ಬಗಳು, ಪೂಜೆಗಳು ಮತ್ತು ಇತರೆ ಧಾರ್ಮಿಕ ಚಟುವಟಿಕೆಗಳ ಮಾಹಿತಿ ಇರುವ ಧಾರ್ಮಿಕ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.