ADVERTISEMENT

ತೀವ್ರ ಬಿಕ್ಕಟ್ಟಿನ ಸಮಯದಲ್ಲಿ ಕಾಣೆಯಾದ ನಿತೀಶ್ ಕುಮಾರ್‌: ತೇಜಶ್ವಿ ಯಾದವ್‌ ಆರೋಪ

ಏಜೆನ್ಸೀಸ್
Published 22 ಜುಲೈ 2020, 12:53 IST
Last Updated 22 ಜುಲೈ 2020, 12:53 IST
ನೆರೆಪೀಡಿತರಿಗೆ ಆಹಾರ ವಿತರಿಸುತ್ತಿರುವ ತೇಜಸ್ವಿ ಯಾದವ್‌
ನೆರೆಪೀಡಿತರಿಗೆ ಆಹಾರ ವಿತರಿಸುತ್ತಿರುವ ತೇಜಸ್ವಿ ಯಾದವ್‌   

ಪಟನಾ: ಕೋವಿಡ್‌ ಮತ್ತು ನೆರೆಹಾವಳಿಯಂತಹ ಬಿಕ್ಕಟ್ಟು ಉಲ್ಬಣಿಸಿರುವ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾಣೆಯಾಗಿದ್ದು, ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜಶ್ವಿ ಯಾದವ್ ಆರೋಪಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ, ನೆರೆಪೀಡಿತರಿಗೆ ಆಹಾರ ವಿತರಿಸಿದ ಅವರು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ಹರಿಹಾಯ್ದಿದ್ದಾರೆ.

'ವ್ಯಾಪಕವಾಗುತ್ತಿರುವ ಕೋವಿಡ್‌ ಬಿಕ್ಕಟ್ಟು ಹಾಗೂ ಪ್ರವಾಹದಿಂದಾಗಿ ರಾಜ್ಯದ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾಣೆಯಾಗಿದ್ದು, ಎಲ್ಲಿಯೂ ಕಾಣಿಸುತ್ತಿಲ್ಲ' ಎಂದು ತೇಜಶ್ವಿ ಯಾದವ್ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.