ADVERTISEMENT

ಕೇರಳ | ಸ್ಕೂಟರ್‌ ಕೀ ತಗುಲಿ ಬಿಜೆಪಿ ಅಭ್ಯರ್ಥಿ ಕಣ್ಣಿಗೆ ಗಾಯ

ಪಿಟಿಐ
Published 23 ಏಪ್ರಿಲ್ 2024, 14:05 IST
Last Updated 23 ಏಪ್ರಿಲ್ 2024, 14:05 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೊಲ್ಲಂ: ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ. ಕೃಷ್ಣಕುಮಾರ್‌ ಅವರ ಕಣ್ಣಿಗೆ ಅವರದೇ ಪಕ್ಷದ ಮುಖಂಡರೊಬ್ಬರ ಕೈಯಲ್ಲಿದ್ದ ಸ್ಕೂಟರ್‌ ಕೀ ತಗುಲಿ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಚಾರದ ವೇಳೆ ತನ್ನ ಮೇಲೆ ಆಯುಧದಿಂದ ದಾಳಿ ನಡೆದಿದ್ದು, ರಾಜಕೀಯ ವಿರೋಧಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಕೃಷ್ಣಕುಮಾರ್‌ ಅವರು ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಈ ಸಂಬಂಧ ಸ್ಥಳೀಯ ಬಿಜೆಪಿ ಮುಖಂಡ ಸನಲ್‌ ಪುತ್ತನ್‌ವಿಳ ಅವರನ್ನು ಪೊಲೀಸರು ಬಂಧಿಸಿ, ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿದರು.

ಕಣ್ಣಗೆ ಗಾಯವಾಗಿರುವ ಕುರಿತು ಕೃಷ್ಣಕುಮಾರ್‌ ಅವರು ಎಕ್ಸ್‌ ಮಾಧ್ಯಮದಲ್ಲೂ ಮಾಹಿತಿ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.