ADVERTISEMENT

ಸ್ಯಾನಿಟೈಸರ್ ಕುಡಿದು ವಿಧಾನಸಭೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ

ಏಜೆನ್ಸೀಸ್
Published 13 ಮಾರ್ಚ್ 2021, 9:16 IST
Last Updated 13 ಮಾರ್ಚ್ 2021, 9:16 IST
ಸುಭಾಶ್‌ ಪನಿಗ್ರಾಹಿ (ಫೇಸ್‌ಬುಕ್‌ ಚಿತ್ರ)
ಸುಭಾಶ್‌ ಪನಿಗ್ರಾಹಿ (ಫೇಸ್‌ಬುಕ್‌ ಚಿತ್ರ)   

ಭುವನೇಶ್ವರ್:‌ ಬಿಜೆಪಿ ಶಾಸಕ ಸುಭಾಶ್‌ ಪನಿಗ್ರಾಹಿ ಅವರು ಒಡಿಶಾ ವಿಧಾನಸಭೆಯಲ್ಲಿ ಸ್ಯಾನಿಟೈಸರ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.

ರಾಜ್ಯದಲ್ಲಿ ಭತ್ತ ಸಂಗ್ರಹಣೆಗೆಸಂಬಂಧಿಸಿದ ಸಮಸ್ಯೆಗಳತ್ತ ಗಮನ ಸೆಳೆಯುವ ಸಲುವಾಗಿವಿಧಾನಸಭೆ ಅಧಿವೇಶನದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಶಾಸಕರೇ ಹೇಳಿಕೊಂಡಿದ್ದಾರೆ.

ʼಡೇಬ್‌ಗಬ್‌ ಪ್ರದೇಶದಲ್ಲಿ ಭತ್ತದ ಸಂಗ್ರಹಣೆ ನಡೆಯುತ್ತಿಲ್ಲ. 2 ಲಕ್ಷ ಕ್ವಿಂಟಾಲ್‌ನಷ್ಟು ಭತ್ತ ಮಾರಾಟವಾಗದೇ ಬಿದ್ದಿದೆ. ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆʼ ಎಂದು ಪನಿಗ್ರಾಹಿ ಅವರು ಅಧಿವೇಶನದ ಬಳಿಕತಿಳಿಸಿದ್ದಾರೆ.

ADVERTISEMENT

ಒಡಿಶಾ ವಿಧಾನಸಭೆಯಲ್ಲಿ ಫೆಬ್ರುವರಿ 18 ರಂದು ಬಜೆಟ್‌ ಅಧಿವೇಶನ ಆರಂಭವಾಗಿದ್ದು, ಎರಡು ಹಂತಗಳಲ್ಲಿ ಏಪ್ರಿಲ್‌ 9ರ ವರೆಗೆ ನಡೆಯಲಿದೆ. ಫೆಬ್ರುವರಿ 22 ರಂದು ಬಜೆಟ್‌ ಮಂಡನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.