ADVERTISEMENT

ಬಿಜೆಪಿಯ ನವ ರಾಷ್ಟ್ರೀಯವಾದಕ್ಕೆ ಸಾವರ್ಕರ್‌ ಗುರಾಣಿ: ಶಿವಸೇನಾ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 14:00 IST
Last Updated 27 ಫೆಬ್ರುವರಿ 2020, 14:00 IST
ಸಾವರ್ಕರ್‌ ಭಾವಚಿತ್ರಕ್ಕೆ ನಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಸಾವರ್ಕರ್‌ ಭಾವಚಿತ್ರಕ್ಕೆ ನಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ   

ಮುಂಬೈ: ನವ ರಾಷ್ಟ್ರೀಯವಾದದ ರಾಜಕಾರಣಕ್ಕೆ ‘ಗುರಾಣಿ’ಯಾಗಿ ಹಿಂದುತ್ವ ಸಿದ್ಧಾಂತವಾದಿ ಸಾವರ್ಕರ್‌ ಅವರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಶಿವಸೇನಾ ಆರೋಪಿಸಿದೆ.

ಸಾವರ್ಕರ್‌ ಬಗ್ಗೆ ಬಿಜೆಪಿಗೆ ಇರುವುದು ‘ನಕಲಿ’ ಪ್ರೀತಿ. ಕೇಂದ್ರವು ಸಾವರ್ಕರ್‌ಗೆ ಏಕೆ ಗೌರವಕೊಟ್ಟಿಲ್ಲ ಎಂಬ ಬಗ್ಗೆ ಬಿಜೆಪಿ ಮುಖಂಡರು ಪ್ರಶ್ನಿಸಬೇಕೇ ಹೊರತು ಮಹಾರಾಷ್ಟ್ರ ಸರ್ಕಾರವನ್ನು ಗುರಿ ಮಾಡಿಕೊಳ್ಳಬಾರದು ಎಂದು ಶಿವಸೇನಾದ ಮುಖವಾಣಿ ‘ಸಾಮ್ನಾ’ದಲ್ಲಿ ಹೇಳಲಾಗಿದೆ.

ಸಾವರ್ಕರ್‌ ವಿಚಾರದಲ್ಲಿ ಸೇನಾವನ್ನು ಮೂಲೆಗುಂಪು ಮಾಡಬಹುದು ಎಂದು ಬಿಜೆಪಿ ಯೋಚಿಸುತ್ತಿದ್ದರೆ ಅದು ಸಾಧ್ಯವಿಲ್ಲ ಎಂದೂ ತಿಳಿಸಲಾಗಿದೆ.

ADVERTISEMENT

‘ಸಾವರ್ಕರ್‌ಗೆ ಸಂಬಂಧಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಮಹಾರಾಷ್ಟ್ರದ ಬಿಜೆಪಿ ಮುಖಂಡರು ಘೋಷಿಸಿದ್ದಾರೆ. ಸಾವರ್ಕರ್‌ ಬಗ್ಗೆ ಬಿಜೆಪಿಗೆ ಗೌರವ ಅಥವಾ ವಿಶ್ವಾಸ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಇದು ರಾಜಕೀಯ ವಿಚಾರ ಮಾತ್ರ’ ಎಂದು ವಿವರಿಸಲಾಗಿದೆ.

‘ವೀರ ಸಾವರ್ಕರ್‌ ಅವರು ಚರ್ಚೆಯವಿಷಯ ಮಾತ್ರ ಅಲ್ಲ. ಅವರ ಸಿದ್ಧಾಂತಗಳನ್ನು ಜೀವನದಲ್ಲಿ ಅನುಸರಿಸಬೇಕು. ಸಾವರ್ಕರ್‌ ಅವರ ಜೀವನವು ತ್ಯಾಗ, ತತ್ವ, ಹೋರಾಟದ ಸಂಕೇತ’ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.