ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎರಡನೇ ಬಾರಿ ಅಧಿಕಾರ ವಹಿಸಿಕೊಂಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಜೂನ್ನಲ್ಲಿ ನಿರಂತರ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ.
‘ರಾಷ್ಟ್ರದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ 500 ಡಿಜಿಟಲ್ ರ್ಯಾಲಿಗಳ ಮುಖಾಂತರ ಸರ್ಕಾರದ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ಮಾಹಿತಿ ನೀಡಲಾಗುವುದು. ಫೇಸ್ಬುಕ್ ಲೈವ್ ಮುಖಾಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾತನಾಡಲಿದ್ದಾರೆ’ ಎಂದು ಪ್ರಧಾನ ಕಾರ್ಯದರ್ಶಿ ಭುಪೇಂದ್ರ ಯಾದವ್ ತಿಳಿಸಿದರು.
ಸರ್ಕಾರದ ಸಾಧನೆಗಳು, ಸ್ವಾವಲಂಬಿ ಭಾರತದಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ಬರೆದ ಪತ್ರವನ್ನು 10 ಕೋಟಿ ಕುಟುಂಬಗಳಿಗೆ ವಿತರಿಸಲಾಗುವುದು’ ಎಂದರು.
ಬಿಹಾರ ಚುನಾವಣೆಗೆ ಸಿದ್ಧ: ‘ಬಿಹಾರ ಚುನಾವಣೆಗೆ ಪಕ್ಷವು ಸಿದ್ಧತೆ ನಡೆಸಿದೆ. ಜನರೊಂದಿಗೆ ಸಂಪರ್ಕಕ್ಕೆ ಹಾಗೂ ಪ್ರಚಾರಕ್ಕೆ ನಾವು ನೂತನ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಿದ್ದೇವೆ. ಚುನಾವಣೆ ಯಾವಾಗ ನಡೆಸಬೇಕು ಎನ್ನುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.