ADVERTISEMENT

ಅಯೋಧ್ಯೆ: ದೇವಸ್ಥಾನದ ಆವರಣದಲ್ಲಿ ರಕ್ತಮಯ ಮೃತದೇಹ ಪತ್ತೆ

ಪಿಟಿಐ
Published 3 ಜುಲೈ 2022, 14:32 IST
Last Updated 3 ಜುಲೈ 2022, 14:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಯೋಧ್ಯೆ: ಇಲ್ಲಿನ ಹನುಮಾನ್‌ ದೇವಸ್ಥಾನದ ಆವರಣದಲ್ಲಿ 30 ವರ್ಷದ ವ್ಯಕ್ತಿಯ ರಕ್ತಮಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಂತಕನನ್ನು ಬಂಧಿಸಲಾಗಿದೆ.

ಕುಮಾರ್‌ ಗಂಜ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯ ಭೌವಪುರ್‌ ಗ್ರಾಮದಲ್ಲಿ ಶನಿವಾರ ರಾತ್ರಿ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆಯಾದ ಪಂಕಜ್‌ ಶುಕ್ಲಾ ಅವರು ರಾತ್ರಿ ಊಟದ ಬಳಿಕ ಮಲಗಲು ದೇವಸ್ಥಾನಕ್ಕೆ ಹೋಗುತ್ತಿದ್ದರು. ಮರುದಿನ ವಾಪಸ್‌ ಮನೆಗೆ ಬಾರದಿದ್ದಾಗ ಅವರ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದರು. ದೇವಸ್ಥಾನದ ಆವರಣದಲ್ಲೇ ರಕ್ತಮಯಗೊಂಡುಬಿದ್ದಿರುವುದು ಪತ್ತೆಯಾಗಿದೆ. ಕುತ್ತಿಗೆ ಭಾಗಕ್ಕೆ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೆಲವೇ ಗಂಟೆಗಳಲ್ಲಿ ಹಂತಕನನ್ನು ಬಂಧಿಸಲಾಗಿದೆ. ಕೊಲೆಯಾದ ವ್ಯಕ್ತಿಯ ಸಂಬಂಧಿ ಗುಲ್ಲು ಮಿಶ್ರಾನೆ ಕೊಲೆಗಾರ ಎಂಬುದು ಪತ್ತೆಯಾಗಿದೆ. ಮಾತಿನ ಬರದಲ್ಲಿ ಪರಸ್ಪರ ನಡೆದ ವಾಗ್ವಾದವೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.