ADVERTISEMENT

ಲಖಿಂಪುರ ಖೇರಿ ಪ್ರಕರಣ: ಸಾಕ್ಷಿದಾರ ಸಹೋದರನ ಮೇಲೆ ಹಲ್ಲೆ

ಪಿಟಿಐ
Published 11 ಡಿಸೆಂಬರ್ 2022, 16:12 IST
Last Updated 11 ಡಿಸೆಂಬರ್ 2022, 16:12 IST
ಲಖಿಂಪುರ ಖೇರಿ ದುರಂತ
ಲಖಿಂಪುರ ಖೇರಿ ದುರಂತ   

ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕಳೆದ ವರ್ಷ ನಡೆದ ಹಿಂಸಾಚಾರ ಕೃತ್ಯದ ಸಾಕ್ಷಿದಾರ ವ್ಯಕ್ತಿಯ ಸಹೋದರನ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಸರ್ವಜಿತ್ ಸಿಂಗ್ ಮೇಲೆ ಶುಕ್ರವಾರ ರಾತ್ರಿ ಹಲ್ಲೆ ನಡೆದಿದ್ದು, ಗಾಯಗೊಂಡಿದ್ದಾರೆ.ಈತಲಖಿಂಪುರ ಖೀರಿಯಲ್ಲಿ2021ರ ಅಕ್ಟೋಬರ್‌3ರಂದು ನಡೆದ ಹಿಂಸಾಚಾರದ ಘಟನೆಗೆ ಸಾಕ್ಷಿಯಾಗಿರುವ ಪ್ರಭಜಿತ್ ಸಿಂಗ್ ಅವರ ಸಹೋದರ.

ತಿಕುನಿಯಾ ನಗರದಲ್ಲಿ ಸ್ನೇಹಿತರುಆಯೋಜಿಸಿದ್ದ ಔತಣಕೂಟಕ್ಕೆ ಹೋಗಿದ್ದಾಗ, ಹಿಂಸಾಚಾರದ ಆರೋಪಿ ವಿಕಾಸ್‌ ಚಾವ್ಲಾ ಮತ್ತು ಆತನ ಸಹಚರರು ನಿಂದಿಸಿ, ಹರಿತ ಆಯುಧಗಳಿಂದ ಹಲ್ಲೆ ನಡೆಸಿದರು ಎಂದುಸರ್ವಜಿತ್ಸಿಂಗ್‌ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ADVERTISEMENT

ಈ ಹಲ್ಲೆಗೂ 2021ರಲ್ಲಿ ನಡೆದ ಹಿಂಸಾಚಾರಕ್ಕೂ ಸಂಬಂಧವಿಲ್ಲವೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಲಖಿಂಪುರ ಖೀರಿ ಹಿಂಸಾಚಾರದಲ್ಲಿ ನಾಲ್ವರು ರೈತರು, ಒಬ್ಬ ಪತ್ರಕರ್ತ, ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಚಾಲಕ ಸೇರಿಎಂಟು ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.