ADVERTISEMENT

ಬಜೆಟ್‌ ಮುಗಿದರೂ ಹಣಕಾಸು ಸಚಿವಾಲಯಕ್ಕೆ ಪತ್ರಕರ್ತರಿಗಿಲ್ಲ ಮುಕ್ತ ಪ್ರವೇಶ

ನಿರ್ಬಂಧ ಮುಂದುವರಿಸಿದ ನಿರ್ಮಲಾ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 1:54 IST
Last Updated 9 ಜುಲೈ 2019, 1:54 IST
   

ನವದೆಹಲಿ:ಬಜೆಟ್‌ ಮಂಡನೆಯಾದ ಬಳಿಕವೂ ದೆಹಲಿಯ ನಾರ್ಥ್ ಬ್ಲಾಕ್‌ನಲ್ಲಿರುವ ಹಣಕಾಸು ಸಚಿವಾಲಯದ ಕಚೇರಿಗೆ ಪತ್ರಕರ್ತರ ಪ್ರವೇಶ ನಿರ್ಬಂಧ ಮುಂದುವರಿಸಲಾಗಿದೆ ಎಂದು ವರದಿಯಾಗಿದೆ.

ಪಿಐಬಿಯಿಂದ (ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ) ಮಾನ್ಯತೆ ಪಡೆದಿರುವ ಪತ್ರಕರ್ತರೂ ಸಹ ಸರ್ಕಾರಿ ಅಧಿಕಾರಿಗಳಿಂದ ಅನುಮತಿ ಪಡೆದರೆ ಮಾತ್ರವೇ ಸದ್ಯ ಹಣಕಾಸು ಸಚಿವಾಲಯ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪಿಐಬಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೂ ಸಚಿವಾಲಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಇದೇ ಮೊದಲು ಎನ್ನಲಾಗಿದೆ.

ಸಾಮಾನ್ಯವಾಗಿ ಬಜೆಟ್ ಮಂಡನೆಗೂ ಮೊದಲಿನ ಎರಡು ತಿಂಗಳು, ಬಜೆಟ್ ಸಿದ್ಧತೆ ವೇಳೆ ಸಚಿವಾಲಯಕ್ಕೆ ಪತ್ರಪರ್ತರ ಪ್ರವೇಶ ನಿರ್ಬಂಧಿಸಿರಲಾಗುತ್ತದೆ. ಆದರೆ, ಪಿಐಬಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆಬಜೆಟ್ ಮಂಡನೆಯಾದ ಬಳಿಕ ಸಚಿವಾಲಯಕ್ಕೆ ಮುಕ್ತ ಪ್ರವೇಶವಿದೆ.

ADVERTISEMENT

ಈ ಮಧ್ಯೆ, ಪತ್ರಕರ್ತರ ನಿರ್ಬಂಧಕ್ಕೆ ಸಂಬಂಧಿಸಿ ಅಧಿಕೃತ ಆದೇಶ ಹೊರಡಿಸಲಾಗಿಲ್ಲ ಎಂದು ಹಣಕಾಸು ಸಚಿವಾಲಯದ ವಕ್ತಾರರು ತಿಳಿಸಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.