ADVERTISEMENT

ಗೋವುಗಳ ಕಳ್ಳ ಸಾಗಣೆ ಪ್ರಕರಣ: ಪಶ್ಚಿಮ ಬಂಗಾಳದ ಹಲವೆಡೆ ಸಿಬಿಐ ಶೋಧ

ಪಿಟಿಐ
Published 31 ಡಿಸೆಂಬರ್ 2020, 7:59 IST
Last Updated 31 ಡಿಸೆಂಬರ್ 2020, 7:59 IST
ಅಭಿಷೇಕ್‌ ಬ್ಯಾನರ್ಜಿ
ಅಭಿಷೇಕ್‌ ಬ್ಯಾನರ್ಜಿ   

ನವದೆಹಲಿ: ಗೋವುಗಳ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳವು (ಸಿಬಿಐ) ಪಶ್ಚಿಮ ಬಂಗಾಳದ ಹಲವಡೆ ಶೋಧ ನಡೆಸಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಮತ್ತು ಟಿಎಂಸಿ ನಾಯಕ ವಿನಯ್‌ ಮಿಶ್ರಾ ಅವರ ಮನೆಯಲ್ಲೂ ಸಿಬಿಐ ಶೋಧ ನಡೆಸಿದೆ. ಅಲ್ಲದೆ ವಿನಯ್‌ ಮಿಶ್ರಾ ಅವರಿಗೆ ದೇಶದಿಂದ ಹೊರ ಹೋಗದಂತೆ ಲುಕ್‌ಔಟ್‌ ನೋಟಿಸ್‌‌ ಕೂಡ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಿನಯ್‌ ಮಿಶ್ರಾಗೆ ಸಂಬಂಧಿಸಿದ ಕೋಲ್ಕತ್ತದ ಎರಡು ಸ್ಥಳಗಳು ಮತ್ತು ಇತರ ‍ಪ್ರದೇಶಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಈ ಪ್ರಕರಣದಡಿ ಗೋವು ಕಳ್ಳ ಸಾಗಣೆಯ ಕಿಂಗ್‌ಪಿನ್‌ ಎನ್ನಲಾದ ಇಬ್ಬರು ವ್ಯಕ್ತಿಗಳು ಮತ್ತು ಬಿಎಸ್‌ಎಫ್‌ನ ಇಬ್ಬರು‌ ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ ಅವರು ಮಾಹಿತಿ ನೀಡಿದರು.

ADVERTISEMENT

ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಗೋವುಕಳ್ಳ ಸಾಗಣೆ ಪ್ರಕರಣಗಳು ಹೆಚ್ಚಿವೆ ಎಂಬುದು ಸಿಬಿಐನ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಗೋವುಗಳ ಕಳ್ಖ ಸಾಗಣೆಗೆ ಬಿಎಸ್‌ಎಫ್‌ ಮತ್ತು ಕಸ್ಟಮ್ಸ್‌ನ ಕೆಲ ಭ್ರಷ್ಟ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.