ADVERTISEMENT

ಲಂಚ: ಹೆದ್ದಾರಿ ಇಲಾಖೆ ಅಧಿಕಾರಿ ಬಂಧನ

ಪಿಟಿಐ
Published 15 ಅಕ್ಟೋಬರ್ 2025, 16:02 IST
Last Updated 15 ಅಕ್ಟೋಬರ್ 2025, 16:02 IST
_
_   

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ (ಎನ್‌ಎಚ್‌ಐಡಿಸಿಎಲ್‌) ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಪ್ರಾದೇಶಿಕ ಅಧಿಕಾರಿಯನ್ನು ₹10 ಲಕ್ಷ ಲಂಚ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಗುವಾಹಟಿಯಲ್ಲಿ ಬಂಧಿಸಿದೆ ಎಂದು ಅಧಿಕಾರಿಳು ಬುಧವಾರ ತಿಳಿಸಿದ್ದಾರೆ.

ಮೈಸ್ನಮ್ ರಿತೇನ್ ಕುಮಾರ್ ಸಿಂಗ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆದ ದಾಳಿಯ ಸಂದರ್ಭ, ₹2.62 ಕೋಟಿ ನಗದು ಮತ್ತು ದೇಶದಾದ್ಯಂತ ಅವರ ಮತ್ತು ಅವರ ಕುಟುಂಬ ಸದಸ್ಯರ ಒಡೆತನದ 9 ಆಸ್ತಿಗಳು ಮತ್ತು 20 ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಸಿಬಿಐ ಹೇಳಿದೆ.

ದಾಳಿಯ ಸಮಯದಲ್ಲಿ ಸಿಂಗ್ ಅವರ ಹೆಸರಿನಲ್ಲಿ ದುಬಾರಿ ವಾಹನಗಳ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.