ನವದೆಹಲಿ: ಭಾರತದಲ್ಲೇ ತಯಾರಿಸಿ (ಮೇಕ್ ಇನ್ ಇಂಡಿಯಾ) ಅಭಿಯಾನದ ವಿಚಾರದಲ್ಲಿ ಭಾರತ ಸರ್ಕಾರ ಮತ್ತು ಸಶಸ್ತ್ರ ಪಡೆಗಳು ಬದ್ಧತೆ ಹಾಗೂ ಸಂಕಲ್ಪ ಮೆರೆದಿವೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜ. ಬಿಪಿನ್ ರಾವತ್ ಹೇಳಿದ್ದಾರೆ.
‘ದೇಶದ ರಕ್ಷಣಾ ಕ್ಷೇತ್ರವಿಂದು ಟೇಕಾಫ್ ಆಗುವ ಹಂತದಲ್ಲಿದೆ. ಸರ್ಕಾರ ಮತ್ತು ಸಶಸ್ತ್ರ ಪಡೆಗಳು ಮೇಕ್ ಇನ್ ಇಂಡಿಯಾದೆಡೆಗಿನ ಬದ್ಧತೆ ಪ್ರದರ್ಶಿಸಿವೆ. ಭಾರತೀಯ ಪರಿಹಾರಗಳೊಂದಿಗೆ ದೇಶದ ಯುದ್ಧಗಳನ್ನು ಗೆಲ್ಲಲು ನಾವು ಬದ್ಧರಾಗಿದ್ದೇವೆ’ ಎಂದು ರಕ್ಷಣಾ ರಫ್ತಿಗೆ ಸಂಬಂಧಿಸಿದ ವಿಚಾರ ಸಂಕಿರಣವೊಂದರಲ್ಲಿ ಅವರು ಹೇಳಿದ್ದಾರೆ.
‘ಬಹು ಆಯಾಮದ ತಂತ್ರಜ್ಞಾನದ ಈ ಯುಗದಲ್ಲಿ, ವಿರೋಧಿಗಳಿಗಿಂತ ಮುಂದಿರಲು ನಾವು ನಿರಂತರ ಆವಿಷ್ಕಾರಗಳು ಮತ್ತು ಆಧುನಿಕ ತಾಂತ್ರಿಕ ಪರಿಹಾರಗಳತ್ತ ಗಮನ ಹರಿಸಬೇಕಿದೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ:ಚೀನಾ ಗಡಿ ಬಿಕ್ಕಟ್ಟು: ಮಾಸ್ಕೊದಲ್ಲೂ ಸಿಗದ ಪರಿಹಾರ!
‘ಸೇನಾ ವ್ಯವಹಾರಗಳ ಇಲಾಖೆ (ಡಿಎಂಎ) ಸ್ಥಾಪನೆಯಿಂದ ಸೇನೆಗೂ ಕೇಂದ್ರ ಸರ್ಕಾರದ ಕಟ್ಟಡದಲ್ಲಿ ಪ್ರಮುಖ ಸ್ಥಾನ ದೊರೆತಂತಾಗಿದೆ. ರಕ್ಷಣಾ ಸಚಿವಾಲಯದ ಪುನಾರಚನೆ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಲಿದೆ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.